ವರದಿ : ಈಶ್ವರ ಎಂ. ಐಲ್/ ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ಬಿಲ್ಲವರ ಅಸೋಷಿಯೇಶನ್, ನಾಲಾಸೋಪಾರ-ವಿರಾರ್ ಸ್ಥಳೀಯ ಸಮಿತಿಯ ವತಿಯಿಂದ ಶೈಕ್ಷಣಿಕ ಆರ್ಥಿಕ ನೆರವು ಕಾರ್ಯಕ್ರಮವು ಜೂನ್ ೨೮ರಂದು ನಾಲಾಸೋಪಾರ ಪೂರ್ವದ ಆಚೋಲೆ ಗಣಪತಿ ಮಂದಿರದ ಹಾಲ್ ನಲ್ಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಗಣೇಶ್ ವಿ. ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಿತು.
ಅತಿಥಿಗಳಾಗಿ ಶ್ರೀನಿವಾಸ ನಾಯ್ಡು ಮತ್ತು ಧನಂಜಯ ಕೋಟ್ಯಾನ್, ಸದಾಶಿವ ಕರ್ಕೇರ, ಸ್ಥಳಿಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಜಗದೀಶ ಆರ್ ಅಮೀನ್, ಕಾರ್ಯದರ್ಶಿ ಆನಂದ ಸಿ. ಕೋಟ್ಯಾನ್, ಕೋಶಾಧಿಕಾರಿ ಪ್ರಮೋದ್ ಎಸ್. ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಲವಾರು ಸ್ಥಾಪಕ ಸದಸ್ಯರುಗಳು, ಸ್ಥಳೀಯ ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.