ಕನ್ನಡ ವಾರ್ತೆಗಳು

ಬಾವಿಯಲ್ಲಿ ಮೃತ ದೇಹ ಪತ್ತೆ : ಅತ್ಮಹತ್ಯೆ ಶಂಕೆ.

Pinterest LinkedIn Tumblr

Katipall_susied_photo_1

ಸುರತ್ಕಲ್,ಜುಲೈ.03: ಸುರತ್ಕಲ್ – ಕಾಟಿಪಳ್ಳ ಒಂದನೇ ಬ್ಲಾಕ್ ನಿವಾಸಿ ಮಧುಸೂದನ ರಾವ್ (55) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ವೃತ್ತಿಯಲ್ಲಿ ಪೈಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಧುಸೂದನ್ ರಾವ್ ಹಲವು ತಿಂಗಳಿನಿಂದ ಮಾನಸಿಕವಾಗಿ ಖಿನ್ನರಾಗಿದ್ದರೆನ್ನಲಾಗಿದೆ ಇವರು ವಿವಾಹಿತರಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Katipall_susied_photo_2 Katipall_susied_photo_3 Katipall_susied_photo_4 Katipall_susied_photo_5

ಕಳೆದ ಎರಡು ದಿನಗಳಿಂದ ಮಧುಸೂಧನ್ ನಾಪತ್ತೆಯಾಗಿದ್ದು, ಈ ಬಗ್ಗೆ ಮನೆಯವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಧುದೂದನ ರಾವ್ ಆದರ್ಶ ಯುವಕ ಮಂಡಲದ ಸ್ಥಾಪಕಾಧ್ಯಕ ಕೂಡ ಆಗಿದ್ದರು. ಇವರು ಆತ್ಮಹತ್ಯೆ ಮಾಡಲು ಕಾರಣವೇನೆಂದು ಇನ್ನಷ್ಟೆ ತಿಳಿಯಬೇಕಾಗಿದೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Write A Comment