ಕನ್ನಡ ವಾರ್ತೆಗಳು

ಯುವ ಕಾಂಗ್ರೆಸ್‌ನಿಂದ ಸಹಾಯ ಹಸ್ತ

Pinterest LinkedIn Tumblr

Jr_lobo_photo

ಮಂಗಳೂರು,ಜೂನ್.30: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಉಪಾದ್ಯಕ್ಷ ರಮಾನಂದ್ ಪೂಜಾರಿಯವರ ನೇತೃತ್ವದಲ್ಲಿ ಜೆಪ್ಪು ಅರಕೆರೆಬೈಲು ನಿವಾಸಿ ಯಶೋಧರವರ ಪುತ್ರ ಬಾಲಕ ಗೌತಮ್‌ರವರ ವೈದ್ಯಕೀಯ ಚಿಕಿತ್ಸೆಗೆ 10,000 ರೂಪಾಯಿಯ ಚೆಕ್ಕನ್ನು ಶಾಸಕ ಜೆ. ಆರ್. ಲೋಬೊರವರು ವಿತರಿಸಿದರು.

ಕಾರ್ಪೋರೇಟರ್ ಕವಿತ ವಾಸು, ಕಾಂಗ್ರೆಸ್ ಮುಂಖಡರಾದ ಟಿ.ಕೆ. ಸುಧೀರ್, ಬೆನೆಟ್ ಡಿ’ಮೆಲ್ಲೊ, ಮಹಮದ್ ಹುಸೈನ್, ಗುರು ಪ್ರವಿಣ್, ಕೃತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Write A Comment