ಉಡುಪಿ: ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯೋರ್ವ ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ಘಟನೆ ಬ್ರಹ್ಮಾವರ ಸಮೀಪದ ಚೇರ್ಕಾಡಿ ಎಂಬಲ್ಲಿ ನಡೆದಿದೆ.
ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಪೇತ್ರಿ ನಿವಾಸಿ ಬಾಲಕೃಷ್ಣ ಶೆಟ್ಟಿ ಶೆಟ್ಟಿಯವರ ಪುತ್ರನಾದ ಮೋಹಿತ್ ಶೆಟ್ಟಿ (೧೭) ಎನ್ನುವ ವಿದ್ಯಾರ್ಥಿಯೇ ನೇಣಿಗೆ ಶರಣಾದಾತ.
ಮೋಹಿತ್ ಶೆಟ್ಟಿ ಬ್ರಹ್ಮಾವರದ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಆದರೇ ಮನೆಯಲ್ಲಿ ತಾನೂ ತೇರ್ಗಡೆಯಾಗಿದ್ದೇನೆಂದು ಹೇಳಿದ್ದ ಈತನ ಪೋಷಕರನ್ನ ಶುಕ್ರವಾರ ಕಾಲೇಜಿಗೆ ಕರೆಸಿದ್ದರು. ಈ ವೇಳೆ ಮನೆಯವರಿಗೆ ತಾನೂ ಅನುತ್ತೀರ್ಣನಾದ ವಿಚಾರ ತಿಳಿದ ಕಾರಣಕ್ಕಾಗಿ ಅವಮಾನಗೊಂಡ ಈತ ಶುಕ್ರವಾರ ಸಂಜೆ ಸುಮಾರಿಗೆ ತನ್ನ ಮನೆಯ ಹಜಾರದ ಮೇಲ್ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.