ಮಂಗಳೂರು:ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶಿ ಹಣವನ್ನು ಸ್ಮಗ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಅತನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ವಿದೇಶಿ ಕರೆನ್ಸಿಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಪೆರಂಬೂರು ನಿವಾಸಿ ಅಬ್ದುಲ್ ಖಾದರ್ ಎಂದು ಹೆಸರಿಸಲಾಗಿದೆ. ಈತ ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಮಂಗಳೂರಿನಿಂದ ದುಬೈಗೆ ಹೊರಟಿದ್ದ ಸಂದರ್ಭ ಈತನ ಬಳಿ ಯಾವುದೇ ದಾಖಲೆಗಳಿಲ್ಲದೆ ಅಕ್ರವಾಗಿ ಸಾಗಿಸುತ್ತಿದ್ದ 18,250 ಸೌದಿ ಆರೇಬಿಯಾ ರಿಯಾಲ್ಸ್, 1075 ಯುಎಇ ದಿರ್ಹ್ಯಾಮ್, 860 ಕುವೈತ್ ದಿರ್ಹ್ಯಾಮ್, 3,650 ಖತಾರ್ ರಿಯಾಲ್ಸ್, 55 ಬೆಹ್ರೇನ್ ದಿನಾರ್ಸ್, 500 ಯು.ಎಸ್. ಡಾಲರ್ ಸೇರಿ ಒಟ್ಟು 7,54,411 ರೂ ಹಣ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.