ಕನ್ನಡ ವಾರ್ತೆಗಳು

ಅಕ್ಷತ ದೇವಾಡಿಗ ನಿಗೂಡ ಸಾವಿನ ತನಿಖೆಗೆ ಆಗ್ರಹಿಸಿ ಉಡುಪಿ ದೇವಾಡಿಗ ಯುವ ವೇದಿಕೆಯಿಂದ ಸಿ.ಎಮ್‌ಗೆ ಮನವಿ

Pinterest LinkedIn Tumblr

Udupi_Devadiga_Youth

ಉಡುಪಿ ಜೂ, 19: ಬೈಂದೂರಿನಲ್ಲಿ ನಿಗೂಡವಾಗಿ ಸಾವನಪ್ಪಿದ ವಿದ್ಯಾರ್ಥಿನಿ ಅಕ್ಷತ ದೇವಾಡಿಗ ಬಗ್ಗೆ ಅತಿ ಶೀಘ್ರವಾಗಿ ಮತ್ತು ನಿಷ್ಪಕ್ಷವಾಗಿ ಪೋಲಿಸ್ ಮತ್ತು ಸಿ ಓ ಡಿ ತನಿಖೆಯಾಗ ಬೇಕೆಂದು ಮತ್ತು ಯುವತಿಯ ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು
ಉಡುಪಿ ದೇವಾಡಿಗ ಯುವ ವೇದಿಕೆ ವತಿಯಿಂದ ಮುಖ್ಯ ಮಂತ್ರಿಯವರಿಗೆ ಉಡುಪಿ ಜಿಲ್ಲಾ ದಂಡಾಧಿಕಾರಿ ಮೂಲಕ ಮನವಿಯನ್ನು ಸಲ್ಲಿಸಲಾಯಿತು.

ಉಡುಪಿ ದೇವಾಡಿಗ ಯುವ ವೇದಿಕೆ ಅಧ್ಯಕ್ಷ ಕಾರ್ತಿಕ್ ಕುಮಾರ್, ಕಾರ್ಯದರ್ಶಿ ಪ್ರಭಾಕರ ದೇವಾಡಿಗ, ಖಜಾಂಚಿ ಪ್ರವೀಣ್ ಕುಮಾರ್, ಪ್ರದೀಪ್ ಮೊಯ್ಲಿ, ರಾಕೇಶ್ ಕುಮಾರ್, ಗುರು ಪ್ರಸಾದ್, ಪ್ರತೀಕ್ ಮತ್ತು ಹಿರಿಯಡ್ಕ ರಾಘವೇಂದ್ರ ಜಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

Write A Comment