ಡಾಟಾ ಸೆಂಟರ್ ದಿನದ 24ಗಂಟೆ, ವಾರದ 7 ದಿನವೂ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಬ್ಯಾಂಕ್ 99 ಶಾಖೆಗಳಲ್ಲಿ ಇಂಟರ್ ನೆಟ್ಟ್ , ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ಸೇವೆಯನ್ನು ನೀಡಲು ಈ ಡಾಟಾ ಸೆಂಟರ್ ಪೂರಕವಾಗಿದೆ. ಹೊಸ ಹೊಸ ತಂತ್ರಜ್ಞಾನದ ಮೂಲಕ ಎಸ್.ಸಿಡಿಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಹೆಚ್ಚು ಹತ್ತಿರವಾಗಿದ್ದು ಮುಂದಿನ ದಿನಗಳಲ್ಲಿ ಇಂಟರ್ ಬ್ಯಾಂಕಿಂಗ್, ಮೋಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆಯನ್ನು ರೂಪಿಸಲು ಮುಂದಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.
ಕುಶಾಲಪ್ಪ ಕುಟುಂಬಕ್ಕೆ ಅರ್ಥಿಕ ಸ್ಪಂದನೆ:
ಇದೇ ಸಂದರ್ಭದಲ್ಲಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಪ್ರಾಣಿ ಪರಿಚಾರಕ, ಬಂಟ್ವಾಳ ತಾಲೂಕಿನ ವೀರಕಂಬ ಕೆಲಿಂಜದ ಕುಶಾಲಪ್ಪ ಗೌಡ ಹುಲಿಯ ದಾಳಿಗೆ ಕರ್ತವ್ಯ ನಿರತರಾಗಿದ್ದ ಸಂಧರ್ಭದಲ್ಲಿ ಬಲಿಯಾಗಿದ್ದು ಇವರ ಕುಟುಂಬಕ್ಕೆ ಎಸ್.ಸಿ.ಡಿ.ಸಿಸಿ ಬ್ಯಾಂಕ್ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ತಲಾ ಒಂದು ಲಕ್ಷ ಒಟ್ಟು 2 ಲಕ್ಷ ಆರ್ಥಿಕ ನೆರೆವಿನ ಚೆಕ್ ನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.