ಕನ್ನಡ ವಾರ್ತೆಗಳು

ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕೈಯಲ್ಲಿದ್ದ ಹಣದ ಪರ್ಸ್ ಎಗರಿಸಿದ ದುಷ್ಕರ್ಮಿಗಳು

Pinterest LinkedIn Tumblr

Mumbai- Robbery

ಉಳ್ಳಾಲ, ಜೂ.8: ಅಂಗಡಿ ಮುಚ್ಚಿ ಮನೆ ಕಡೆಗೆ ಹೋಗುತ್ತಿದ್ದ ಚಂದ್ರಶೇಖರ್ ಎಂಬವರ ಹ್ಯಾಂಡ್‌ಬ್ಯಾಗ್‌ನ್ನು ಬೈಕ್‌ನಲ್ಲಿ ಬಂದ ತಂಡವೊಂದು ಎಗರಿಸಿ ಪರಾರಿಯಾದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕಾಪಿಕಾಡ್ ಉಮಾಮಹೇಶ್ವರಿ ದೇವಸ್ಥಾನದ ಬಳಿ ಶನಿವಾರ ರಾತ್ರಿ ನಡೆದಿದೆ.

ಕಾಪಿಕಾಡ್ ಉಮಾಮಹೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ಚಂದ್ರಶೇಖರ್ ಅವರು ಬಂದರ್‌ನಲ್ಲಿ ಅಂಗಡಿ ಹೊಂದಿದ್ದು, ಪ್ರತೀ ದಿನ ರಾತ್ರಿ ಲೆಕ್ಕಪತ್ರ ಮುಗಿಸಿ ಅಂಗಡಿ ವ್ಯಾಪಾರದ ಹಣವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಮನೆಗೆ ಹೋಗುತ್ತಿದ್ದರು. ಅವರು ಎಂದಿನಂತೆ ಶನಿವಾರ ರಾತ್ರಿ ಅಂಗಡಿ ಬಂದ್ ಮಾಡಿ ಮನೆಗೆ ತೆರಳಲು ಬಸ್‌ನಿಂದ ಇಳಿದಿದ್ದಾರೆ. ಆ ವೇಳೆ ಬಸ್‌ನ ಹಿಂದೆ ಬೈಕ್ ಕೂಡಾ ಇತ್ತು ಎನ್ನಲಾಗಿದೆ.

ಚಂದ್ರಶೇಖರ್ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಇಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರ ತಂಡ ಚಂದ್ರಶೇಖರ್‌ರನ್ನು ತಡೆದು ಬೆದರಿಸಿದೆ ಬಳಿಕ ಅವರ ಕೈಯಲ್ಲಿದ್ದ ಹ್ಯಾಂಡ್‌ಬ್ಯಾಗ್‌ನ್ನು ಎಗರಿಸಿ ಪರಾರಿಯಾಗಿದೆ. ಬ್ಯಾಗ್‌ನಲ್ಲಿ ವ್ಯಾಪಾರಕ್ಕೆಂದು ಇಟ್ಟಿದ್ದ ಒಂದು ಲಕ್ಷ ರೂ., ವೋಟರ್ ಐಡಿ, ಪಾನ್ ಕಾರ್ಡ್ ಮತ್ತು ಇತರ ದಾಖಲೆ ಪತ್ರಗಳು ಇದ್ದವು ಎಂದು ದೂರಲಾಗಿದೆ.

ಅವರ ಬ್ಯಾಗ್‌ನಲ್ಲಿ ಹಣ ಇರುವ ಬಗ್ಗೆ ಮಾಹಿತಿ ತಿಳಿದವರೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಗೆ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

Write A Comment