ಮಂಗಳೂರು,ಜೂನ್.06 : ಮಂಗಳೂರು ಆಕಾಶವಾಣಿಯ ಹರ್ಷ ವಾರದ ಅತಿಥಿಯ 190ನೇ ಕಾರ್ಯಕ್ರಮದಲ್ಲಿ ಜೂನ್ ೭ರಂದು ಬೆಳಿಗ್ಗೆ 8.30 ಕ್ಕೆ ಮಂಜೇಶ್ವರ ತಾಲೂಕಿನ ಪೈವಳಿಕೆ ಚಿತ್ತಾರಿಬೀಡಿನ ಅರಸು ಶ್ರೀ ರಂಗತ್ರಯಿ ಬಲ್ಲಾಳರು ಭಾಗವಹಿಸಲಿದ್ದಾರೆ.
ಮಂಜೇಶ್ವರ ತಾಲೂಕನ ಪೈವಳಿಕೆ ಪಯ್ಯರ ಆಳ್ವಿಕೆ ಕಂಡ 16 ಗ್ರಾಮಗಳನ್ನೊಳಗೊಂಡ ಪ್ರದೇಶ. ಇಲ್ಲನ ಚಿತ್ತಾರಿ ಚಾವಡಿ ಧರ್ಮದೈವದ ನೆಲೆವೀಡಾಗಿ ಪ್ರಸಿದ್ಧಿ ಪಡೆದಿದೆ.2008 ರಲ್ಲಿ ರಂಗತ್ರಯಿ ಬಲ್ಲಾಳರು ಪಟ್ಟಾಧಿಕಾರ ಸ್ವೀಕರಿಸಿ ಇಲ್ಲಿನ ಪರಂಪರೆ ಆಚಾರಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಉಳ್ಳಾಲ್ತಿ ದೈವ, ಬಜಿಲ ಚಾಮುಂಡಿ, ಅಣ್ಣ ದೈವ ತಮ್ಮ ದೈವಗಳ ಸ್ಥಾನವಾಗಿ ಊರವರ ಶ್ರದ್ಧಾಕೇಂದ್ರವಾಗಿ ಆರಾಧನೆ ನಡಯುತ್ತಿದೆ. ಧರ್ಮಸಮನ್ವಯ, ಭಾವೈಕ್ಯತೆಗೆ ಚಿತ್ತಾರಿ ಬೀಡಿನ ಕೊಡುಗೆ ಅಪಾರವಾಗಿದ್ದು, ವಿಟ್ಲ ಅರಸರ ಜೊತೆ ನಿಕಟ ಬಾಂಧವ್ಯ ಹೊಂದಿರುವುದು ವಿಶೇಷ. ಪಯ್ಯರ ಆಳ್ವಿಕೆಯ ಗತ ಇತಿಹಾಸವನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ.