ಮಂಗಳೂರು,ಜೂನ್.04 : ನಗರದ ಬೋಂದೆಲ್ ನಲ್ಲಿ ಓರ್ವ ಯುವಕನನ್ನು ಇಬ್ಬರು ಸಹೋದರರು ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಬುಧವಾರ ರಾತ್ರಿ ನಡೇದಿದೆ. ಸುರತ್ಕಲ್ ಕೃಷ್ಣನಗರದಲ್ಲಿ ಮುಸ್ತಾಫ್ ಎಂಬ ಯುವಕನಿಗೆ ದಿನೇಶ್ ಮತ್ತು ಸತೀಶ್ ಎಂಬ ಸಹೋದರಿಬ್ಬರು ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ. ಗಾಯಗೊಂಡಿರುವ ಮುಸ್ತಾಫ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಘಟನೆಯು ಕ್ರಿಕೆಟ್ ಆಟದ ವಿಷಯದಲ್ಲಿ ಮೂವರ ನಡುವೆ ಮಾತಿನ ಚಕಮಕಿ ನಡೆದ್ದಿದ್ದು ಈ ಕೃತ್ಯಕ್ಕೆ ಕಾರಣವೆನ್ನಲಾಗಿದೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.