ಮಂಗಳೂರು ಜೂನ್.02: ಸ್ಮಾರ್ಟ್ಸಿಟಿ ಕುರಿತಂತೆ ಮಂಗಳೂರು ಮಹಾನಗರಪಾಲಿಕೆಗೆ ತಂಡ ಭೇಟಿ ನೀಡಿರುವ ವಿಷಯ ಸಂಬಂಧ ಮೇಯರ್ ಜೆಸಿಂತಾ ವಿಜಯಾ ಸ್ಪಷ್ಟೀಕರಣ ನೀಡಿದ್ದಾರೆ. ಕೇಂದ್ರ ಸರಕಾರದಿಂದ ನಿಯೋಜಿಸಿರುವ ತಂಡವೊಂದು ಮಂಗಳೂರು ಮಹಾನಗರಪಾಲಿಕೆಗೆ ಭೇಟಿ ನೀಡುವುದೆಂದು ಮಾತ್ರ ಅಯುಕ್ತರು ಮೌಖಿಕವಾಗಿ ತಿಳಿಸಿದ್ದು,ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿಯನ್ನು ನೀಡಿರುವುದಿಲ್ಲ.ಈ ಕುರಿತು ಸದಸ್ಯರು ಸದನದಲ್ಲಿ ಸದ್ರಿ ತಂಡಕ್ಕೆ ಆದರಾತಿಥ್ಯ ನೀಡುವಲ್ಲಿ ಸರಕಾರಿ ಯಂತ್ರದ ದುರುಪಯೋಗ ಆಗಿದೆ ಎಂದು ಆರೋಪಿಸಿದ್ದು,ಮೇಲ್ನೋಟಕ್ಕೆ ಇದರಲ್ಲಿ ಸತ್ಯಾಂಶ ಕಂಡು ಬಂದಿರುವುದರಿಂದ ತನಿಖೆಗೆ ಸರಕಾರಕ್ಕೆ ಕೋರಲಾಗಿದೆಯೆಂದು ಮಹಾಪೌರರು ಸ್ಪಷ್ಟೀಕರಣ ನೀಡಿದ್ದಾರೆ.
ಕನ್ನಡ ವಾರ್ತೆಗಳು