ಕನ್ನಡ ವಾರ್ತೆಗಳು

ಶಾಸ್ತ್ರ ಹೇಳಿ ದರೋಡೆಗೆ ಸಂಚು : ಆರೋಪಿಗಳು ಸೆರೆ.

Pinterest LinkedIn Tumblr

astro_thief_1

ಪುತ್ತೂರು,ಮೇ.09: ಮನೆ ಮನೆಗೆ ಬಂದು ಶಾಸ್ತ್ರ ಹೇಳುವ ನೆಪದಲ್ಲಿ ದರೋಡೆ ಮಾಡಲು ಮಾರುತಿ ಓಮ್ನಿ ಕಾರಿನಲ್ಲಿ ಕುಳಿತು ಸ್ಕೆಚ್ ಹಾಕುತ್ತಿದ್ದಾಗ ವೇಳೆ ಉಪ್ಪಿನಂಗಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಉಪ್ಪಿನಂಗಡಿ ಸಬ್ ಇನ್ಸ್ ಪೆಕ್ಟರ್ ಜಗದೀಶ್ ರೆಡ್ಡಿ ನೇತೃತ್ವದ ನಡೆದ ಕಾರ್ಯಚರಣೆಯಲ್ಲಿ ತಂಡವನ್ನು  ಆರೋಪಿಗಳನ್ನು ಸೆರೆ ಹಿಡಿದಿದೆ.

ಬಂಧಿತ ಆರೋಪಿಗಳನ್ನು ಕೃಷ್ಣಾಪುರದ ದೇವರಾಜ್, ಅಲೆವೂರಿನ ರಮೇಶ್, ಬೆಂಗಳೂರಿನ ವೆಂಕಟೇಶ್, ನಾಗರಾಜ್ ಸುರತ್ಕಲ್, ಅಂಗಡಿಹಳ್ಳಿ ನಿವಾಸಿ ಪ್ರಕಾಶ್, ಬೆಂಗಳೂರಿನ ಮಣಿಕಂಠ, ಅರಸೀಕೆರೆಯ ಕಾವೇರಪ್ಪ, ಸುರತ್ಕಲ್ ನಿವಾಸಿ ಮಂಜುನಾಥ್ ಎಂದು ತಿಳಿಸಲಾಗಿದೆ. ಹಾಗೂ ಅವರಿಂದ ಲಾಂಗು ಸಹಿತ ಮಾರಕಾಸ್ತ್ರ, ಎರಡು ಮೊಬೈಲ್ ಸೆಟ್, ನಗದು 8100 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

Write A Comment