ಮಂಗಳೂರು,ಮೇ.08 : ನಗರದ ಬೋಳೂರು ಕಟ್ಟೆಯ ಬಳಿ ಇರುವ ಶ್ರೀದೇವಿ ಜನರಲ್ ಸ್ಟೋರ್ ಹಾಗೂ ಸೌಂಡ್ ಸಿಸ್ಟಮ್ನ ಅಂಗಡಿಗೆ ಅಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಂಗಡಿ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಗುರುವಾರ ನಡೆದಿದೆ.
ಬೋಳೂರು ತಿಲಕ್ ನಗರ ನಿವಾಸಿ ಪ್ರಸಾದ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದ್ದು, ಘಟನೆ ಸಂಭವಿಸಿದಾಗ ಅಂಗಡಿ ಮುಚ್ಚಲಾಗಿದ್ದರಿಂದ ಜೀವಕ್ಕೆ ಯಾವದೇ ರೀತಿಯ ಅಪಾಯವಾಗುವ ಸನ್ನಿವೇಶ ತಪ್ಪಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ತಗುಲಿದೆ ಎಂದು ಅಂದಾಜಿಸಲಾಗಿದೆ. ಎಲ್ಲಾ ಎಲೆಕ್ಟ್ರಾನಿಕ್ ವೈರ್ಸ್, ಸಿಸ್ಟಂ ಹಾಗೂ ಸೂರು ಸುಟ್ಟು ಹೋಗಿ ಸುಮಾರು 4 ಲಕ್ಷ ರೂ. ವೆಚ್ಚದ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಅಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.