ಮಂಗಳೂರು,ಎ,28: ನೇಪಾಳ ಭೂಕಂಪ ಸಂತ್ರಸ್ತರಿಗಾಗಿ ಕರಾವಳಿಗರ ಹೃದಯ ಮಿಡಿಯುತ್ತಿದೆ. ಸಂತ್ರಸ್ತರ ಸಹಾಯರ್ಥವಾಗಿ ಸಮಾಜದ ಗಣ್ಯರು. ವಿಧ್ಯಾರ್ಥಿ ಸಮುದಾಯ, ವಿವಿಧ ಸಂಘ ಸಂಸ್ಥೆಗಳು ಬಿಜೆಪಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ನಿಧಿ ಸಂಗ್ರಹದಲ್ಲಿ ತೊಡಗಿದ್ದಾರೆ.
ನಗರದಲ್ಲಿ ವಿಧ್ಯಾಭ್ಯಾಸ ನಡೆಸುತ್ತಿರುವ ನೇಪಾಳಿ ವೈದ್ಯಕೀಯ ವಿಧ್ಯಾರ್ಥಿಗಳೊಂದಿಗೆ ನಿಧಿ ಸಂಗ್ರಹದಲ್ಲಿ ವೈದಕೀಯ ವಿಧ್ಯಾರ್ಥಿಗಳು ತೊಡಗಿದ್ದಾರೆ ಸಿಟಿ ಸೆಂಟರ್ ಮಾಲ್ ನಲ್ಲಿ ನಿಧಿ ಸಂಗ್ರಹ ಅಭಿಯಾನಕ್ಕೆ ಕಾಂಗ್ರೇಸ್ ಹಿರಿಯ ನಾಯಕ ಬಿ ಜನಾರ್ದನ ಪೂಜಾರಿ ಚಾಲನೆ ನೀಡಿದರು.
ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಮಂಗಳೂರು ಪೊಲೀಸ್ ಅಯುಕ್ತ ಮುರುಗನ್ , ಕರಾವಳಿ ಕಾಲೇಜು ಸಮೂಹದ ಅಧ್ಯಕ್ಷ ಎಸ್. ಗಣೇಶ್ ರಾವ್ ಸಹಾಯ ನೀಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.