ಮಂಗಳೂರು,ಎಪ್ರಿಲ್.27: ಸ್ಥಗಿತಗೊಂಡಿರುವ ಎಂಡೋ ಸಂತ್ರಸ್ತರ ಮಾಸಾಶನ ನೀಡಬೇಕು ಮತ್ತು ನ್ಯಾಯಾಲಯದ ಆದೇಶ ಜಾರಿಗೆ ಅಗ್ರಹಿಸಿ ಎಂಡೋ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರು ಸೊಮವಾರ ದ.ಕ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ ಮೋನಪ್ಪ ಭಂಡಾರಿ, ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಎಂಡೋ ಸಂತ್ರಸ್ತರನ್ನು ಕಡೆಗಣಿಸಿದೆ, ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಎಂಡೋ ಸಂತ್ರಸ್ತರಿಗಾಗಿ ಕೈಗೊಂಡ ಕಲ್ಯಾಣ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ಎಂಡೋ ಸಂತ್ರಸ್ತರನ್ನು ಕಡೆಗಣಿಸಿ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಎಂಡೋ ಸಂತ್ರಸ್ತರ ಬೇಡಿಕೆಗಳನ್ನು ಕೂಡಲೇ ಅನಿಷ್ಠಾನಗೊಳಿಸಿ ಇಲ್ಲವಾದಲ್ಲಿ ಎಂಡೊ ಸಂತ್ರಸ್ತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಕುಶಾಲಪ್ಪ ಗೌಡ , ನವೀನ್ ಕುಲಾಲ್ , ಹಿಂದೂ ಮಹಾಸಭಾದ ಧರ್ಮೇಂದ್ರ ಭಾಗವಹಿಸಿದ್ದರು.