ಕನ್ನಡ ವಾರ್ತೆಗಳು

ಬಸ್, ಓಮ್ನಿ ಮುಖಾಮುಖು ಡಿಕ್ಕಿ : ಓಮ್ನಿ ಸವಾರ ಸ್ಥಳದಲ್ಲೇ ಸಾವು

Pinterest LinkedIn Tumblr

beluva_acdent_photo_1

ಮೂಡುಬಿದಿರೆ,ಎಪ್ರಿಲ್.08 : ಖಾಸಗಿ ಬಸ್ ಹಾಗೂ ಓಮ್ನಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓಮ್ನಿ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಬುಧವಾರ ಮಧ್ಯಾಹ್ನ ಬೆಳುವಾಯಿ ಸಮೀಪದ ಕಾಂತಾವರ ಕ್ರಾಸ್ ಬಳಿ ನಡೆದಿದೆ. ಮೃತಪಟ್ಟವರು ಅಲಂಗಾರು ಮಂಜುನಾಥ ಸೈಕಲ್ ಶಾಪ್‍ನ ಮಾಲಕ ವೀರಪ್ಪ ಎಂದು ತಿಳಿದು ಬಂದಿದೆ.

beluva_acdent_photo_2beluva_acdent_photo_3 beluva_acdent_photo_4 beluva_acdent_photo_5beluva_acdent_photo_6beluva_acdent_photo_7

ಬುಧವಾರ ಮಧ್ಯಾಹ್ನ ಸಾಣೂರಿನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಕುಟುಂಬದ ಸದಸ್ಯರೊಂದಿಗೆ ಓಮ್ನಿಯಲ್ಲಿ ಅಲಂಗಾರಿನತ್ತ ಬರುತ್ತಿದ್ದಾಗ, ಮೂಡುಬಿದಿರೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಕಾಂತಾವರ ಕ್ರಾಸ್ ಬಳಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಓಮ್ನಿ ಕಾರು ಸಂಪೂರ್ಣ ಜಖಂಗೊಂಡಿದ್ದು, ವೀರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ತೆರಳಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment