ಕನ್ನಡ ವಾರ್ತೆಗಳು

ಮೆನೋಪಾಸ್ ತಲ್ಲಣ

Pinterest LinkedIn Tumblr

mano

* ಡಾ. ಸೂರಿರಾಜು.ವಿ

ಹೃದಯದ ಕಾಯಿಲೆಗಳು ಮಹಿಳೆಯರನ್ನೇ ಹೆಚ್ಚು ಕಾಡುತ್ತದೆ. ಇದಕ್ಕೆ ಅಧಿಕ ಕೊಲೆಸ್ಟ್ರಾಲ್ ಮುಖ್ಯ ಕಾರಣ. ಅದರಲ್ಲೂ ಮುಟ್ಟು ನಿಲ್ಲುವ ಹಂತವೆಂದರೆ ಮಹಿಳೆಯರ ಮೈಮನ ಬದಲಾವಣೆಗೆ ಒಳಗಾಗುವ ಸಮಯ.

ಮುಟ್ಟು ನಿಲ್ಲುವ ಮೊದಲು ಮಹಿಳೆಯರಲ್ಲಿ ಅದೇ ವಯೋಮಾನದ ಪುರುಷರಿಗಿಂತಲೂ ಅಧಿಕ ಪ್ರಮಾಣದ ಕೊಲೆಸ್ಟ್ರಾಲ್ ಮಟ್ಟವಿರುತ್ತದೆ. ಮುಟ್ಟು ನಿಂತ ನಂತರ ಮಹಿಳೆಯರಲ್ಲಿ ಅದೇ ವಯೋಮಾನದ ಪುರುಷರಂತೆಯೇ ಕೊಲೆಸ್ಟ್ರಾಲ್ ಮಟ್ಟವಿರುತ್ತದೆ. ರಕ್ತದ ಲಿಪಿಡ್‌ಗಳು ಆರೋಗ್ಯದ ಮಟ್ಟದಲ್ಲಿರದಿದ್ದರೆ ಹೃದಯ ಸಮಸ್ಯೆ ಉಂಟಾಗುತ್ತದೆ.

ಹೃದಯ ಸಮಸ್ಯೆ ಉಂಟಾಗುವ ಸಂಭವ ಹೆಚ್ಚಾಗಲು ಲಿಪಿಡ್‌ಗಳ ಅನಾರೋಗ್ಯಕರ ಮಟ್ಟ ರಕ್ತದಲ್ಲಿ ಹೆಚ್ಚಿರುವಿಕೆ ಕಾರಣವಾಗುತ್ತದೆ. ಸಾಮಾನ್ಯ ಕಾರ್ಯನಿರ್ವಹಣೆಗಾಗಿ ದೇಹಕ್ಕೆ ಕೊಲೆಸ್ಟೊರಾಲ್‌ನಂತಹ ಲಿಪಿಡ್‌ಗಳು ಅಗತ್ಯ. ನರಗಳ ಅಂಗಾಂಶ ಸ್ನಾಯುಗಳು, ಚರ್ಮ ಯಕೃತ್ತು, ಕರುಳು ಮತ್ತು ಹೃದಯದಲ್ಲಿರುವ ಕೊಲೆಸ್ಟೊರಾಲ್ ಅನ್ನು ದೇಹವು ಬಳಸಿಕೊಂಡು ಹಾರ್ಮೋನುಗಳನ್ನು ಸೃಷ್ಟಿಸುತ್ತದೆ. ವಿಟಮಿನ್-ಡಿ ಮತ್ತು ಪಿತ್ತರಸಗಳು ಕೊಬ್ಬನ್ನು ಜೀರ್ಣಿಸುತ್ತದೆ. ಆದರೆ ಈ ಕ್ರಿಯೆಗಳಿಗೆ ರಕ್ತದಲ್ಲಿರುವ ಕೇವಲ ಅಲ್ಪ ಪ್ರಮಾಣದ ಕೊಲೆಸ್ಟೊರಾಲ್ ಸಾಕು. ರಕ್ತದಲ್ಲಿ ಕೊಲೆಸ್ಟೊರಾಲ್ ಹೆಚ್ಚಾದರೆ ಹೃದಯದ ಅಪಧಮನಿಗಳಲ್ಲಿ ಪಾಚಿಗಟ್ಟಿ ಹೃದಯ ಮತ್ತಿತರ ಅಂಗಾಂಗಗಳಿಗೆ ರಕ್ತದ ಪೂರೈಕೆಗೆ ಕಡಿಮೆಯಾಗುತ್ತದೆ ಅಥವಾ ಸ್ಥಗಿತವಾಗುತ್ತದೆ. ರಕ್ತವು ಹೃದಯಕ್ಕೆ ಆಮ್ಲಜನಕ ಪೂರೈಕೆ ಮಾಡುವುದರಿಂದ, ಈ ಅಡೆತಡೆಗಳಿಂದಾಗಿ, ಸಾಕಷ್ಟು ಆಮ್ಲ ಜನಕ ಪೂರೈಕೆಯಾಗದಿದ್ದಾಗ ಎದೆನೋವು ಕಾಣಿಸಬಹುದು. ಹೃದಯದ ಒಂದು ಭಾಗಕ್ಕೆ ಆಮ್ಲ ಜನಕ ಪೂರೈಕೆಯಲ್ಲಿ ಕೊರತೆಯಾದರೆ ಅಥವಾ ನಿಂತುಹೋದರೆ ಅದರಿಂದ ಆಘಾತ ಸಂಭವಿಸುವ ಸಾಧ್ಯತೆಯುಂಟು.

ಕಾರಣ
ಅನಾರೋಗ್ಯಕರ ಲಿಪಿಡ್‌ಗಳಿಗೆ, ಅತ್ಯಂತ ಸಾಂದ್ರ ಕೊಬ್ಬು ಮತ್ತು ಕೊಲೆಸ್ಟ್ರಾಲ್‌ಯುಕ್ತ ಆಹಾರ ಸೇವನೆ, ಹೆಚ್ಚಿದ ದೇಹತೂಕ, ವ್ಯಾಯಾಮದ ಕೊರತೆ, ಅನಾರೋಗ್ಯಕರ ರಕ್ತದ ಲಿಪಿಡ್‌ಗಳ ಕೌಟುಂಬಿಕ ಇತಿಹಾಸ, ಮಧುಮೇಹ ಅಥವಾ ಸಕ್ರಿಯವಲ್ಲದ ಥೈರಾಯ್ಡ್ಡ್ ಗ್ರಂಥಿ, ಕೆಲವೊಂದು ಔಷಧಗಳ ಸೇವನೆ, ಮಧ್ಯಪಾನಗಳು ಕಾರಣ. ಲಿಂಗ ಮತ್ತು ವಯಸ್ಸು ಇದಕ್ಕೆ ಕಾರಣವಾಗಹುದು.

ಪರಿಹಾರ
ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ಔಷಧ ಸೂಚಿಸಬಹುದು. ಕೇವಲ ಜೀವಶೈಲಿಯ ಬದಲಾವಣೆ ಮಾತ್ರ ಇದಕ್ಕೆ ಸಾಲದು. ವೈದ್ಯರಿಗೆ ನಾವು ಸೇವಿಸುವ ಎಲ್ಲಾ ಔಷಧಗಳ ಬಗ್ಗೆ ಮಾಹಿತಿ ನೀಡಬೇಕು. ಕಿಡ್ನಿಗೂ ಹೃದಯಕ್ಕೂ ಒಂದಕ್ಕೊಂದು ನಂಟು.ದೀರ್ಘಕಾಲೀನ ಕಿಡ್ನಿ ಸಮಸ್ಯೆಯುಳ್ಳವರಲ್ಲಿ ಹೃದ್ರೋಗ ಸಾಮಾನ್ಯ. ಅಂಥವರು ಹೃದಯಾಘಾತ, ಆ್ಯಂಜಿನಾ (ಎದೆ ನೋವು)ಗಳಿಗೆ ಒಳಗಾಗುವ ಸಂಭವ ಇತರರಿಗಿಂತ ಹೆಚ್ಚು.

ಕಿಡ್ನಿ ಸಮಸ್ಯೆ ಎಷ್ಟು ಕಾಲದಿಂದ ಇದೆ ಎಂಬುದನ್ನು ಆಧರಿಸಿ ರೋಗಿಯ ಆಹಾರ ಸೇವನೆ ಬದಲಾವಣೆಯಾಗುತ್ತದೆ. ಕಿಡ್ನಿ ಸಮಸ್ಯೆ ಉಲ್ಬಣಗೊಂಡಲ್ಲಿ, ಆಹಾರದಲ್ಲಿನ ಫ್ರೊಟೀನ್, ಡೈರಿ ಉತ್ಪನ್ನಗಳು ಹಾಗೂ ಕೆಲವೊಂದು ನಿರ್ದಿಷ್ಟ ಹಂತದಲ್ಲಿ ಮತ್ತು ತರಕಾರಿಗಳನ್ನು ವರ್ತಿಸಬೇಕಾಗುತ್ತದೆ. ನೊಂದಾಯಿತ ಪಥ್ಯಾಹಾರ ತಜ್ಞರು ನಿಮ್ಮ ಪಥ್ಯಾಹಾರವೇನಿರಬೇಕು ಮತ್ತು ಎಷ್ಟಿರಬೇಕು ಎಂಬುದನ್ನು ತಿಳಿಸುವರು.

Write A Comment