ಕನ್ನಡ ವಾರ್ತೆಗಳು

ಪ್ರವೀಣ್ ತೊಗಾಡಿಯಾಗೆ ವಾರಗಳ ಕಾಲ ನಿಷೇಧ; ಉಡುಪಿಗೆ ತೊಗಾಡಿಯ ಬರೊಲ್ಲ..!; ಹಿಂದೂಪರ ಸಂಘಟನೆಗಳ ಆಕ್ರೋಷ

Pinterest LinkedIn Tumblr

praveen_togadia

ಉಡುಪಿ:ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಆಗಮಿಸಲಿದ್ದ ವಿಶ್ವಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯಿ ತೊಗಡಿಯಾ ಅವರ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೊನೆ ಕ್ಷಣದಲ್ಲಿ ಒಂದು ವಾರಗಳ ನಿಷೇಧಾಜ್ಞೆ ಹೊರಡಿಸಿದೆ.

ಪ್ರವೀಣ್ ಭಾಯಿ ತೊಗಡಿಯಾ ಅವರ ಬರುವಿಕೆಗಾಗಿ ಕಾಯುತ್ತಿದ್ದ ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಈಗ ಬೇಸರ ಹಾಗೂ ಆಕ್ರೋಶ ಭುಗಿಲೆದ್ದಿದೆ.

ತೊಗಡಿಯಾ ಅವರ ನಿರ್ಬಂಧ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯಾಗಿದೆ. ನಿಷೇಧಾಜ್ಞೆ ಹೇರುವ ಮೂಲಕ ಹಿಂದೂಭಾಂದವರಲ್ಲಿ ನೋವನ್ನುಂಟು ಮಾಡಿದೆ. ಹಿಂದೂಗಳ ಮೇಲೆ ಸರ್ಕಾರಕ್ಕೆ ಕಾಳಜಿಯಿದ್ದರೆ ತೊಗಡಿಯಾ ಅವರ ನಿಷೇದ ಹಿಂದಪಡೆಯಬೇಕು  ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿದೆ.

Write A Comment