ಕನ್ನಡ ವಾರ್ತೆಗಳು

ಕೆಂಜಾರು ಚಾವಡಿದಡಿ ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ

Pinterest LinkedIn Tumblr

kenjar_road_repar_1

ಮಂಗಳೂರು.ಮಾರ್ಚ್.01 : ಕೆಂಜಾರು ಗ್ರಾಮದ ಚಾವಡಿದಡಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರಿತೇಶ್ ಶೆಟ್ಟಿ ಅವರ ಅನುದಾನದಲ್ಲಿ ನಿರ್ಮಾಣವಾದ ಸುಮಾರು 3.5 ಲಕ್ಷ ಅಂದಾಜು ವೆಚ್ಚದ ಕಾಂಕ್ರೀಟಿಕರಣ ರಸ್ತೆಯನ್ನು ಚಿಕ್ಕಪರಾರಿ ಶಂಕರ ಶೆಟ್ಟಿ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಶೆಟ್ಟಿ, ಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಜೋಕಿಣ ಡಿಕೋಸ್ತಾ, ಶಮಂತ್ ಶೆಟ್ಟಿ, ರೀತೇಶ್ ಶೆಟ್ಟಿ, ದೇಜಪ್ಪ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ವನಜ ಶೆಟ್ಟಿ, ಮಂಜು ಪೂಜಾರಿ, ಸದಾನಂದ ರೈ, ಅನ್ನು ಶೆಟ್ಟಿ ಉಪಸ್ಥಿತರಿದ್ದರು.

kenjar_road_repar_2

ಕಾರ್ಯಕ್ರಮದಲ್ಲಿ ಸಾಮಾಜಿಕವಾಗಿ ಹಲವು ಸೇವೆ ಸಲ್ಲಿಸಿದ ಬಾಲಕೃಷ್ಣ ರೈ, ರಿತೇಶ್ ಶೆಟ್ಟಿ, ಜಯಂತ ತೋಕೂರು, ರತ್ನಶೇಖರ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಅಮೀನ್ ಬಾರಿಂಜ ವಂದಿಸಿದರು.

Write A Comment