ಕನ್ನಡ ವಾರ್ತೆಗಳು

ದೀಪಿಕಾ ನಾಗೇಂದ್ರ ಭಟ್‌ಗೆ ವರದರಾಜ ಆದ್ಯ ಸ್ವರ್ಣಪದಕ

Pinterest LinkedIn Tumblr

deepika_news_photo

ಮುಂಬಯಿ, ಫೆ.24: ಮುಂಬಯಿ ವಿಶ್ವವಿದ್ಯಾಲಯವು ಕಳೆದ ಎಪ್ರೀಲ್ ಮೇ 2014ರ ಕನ್ನಡ ಎಂ.ಎ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ದೀಪಿಕಾ ನಾಗೇಂದ್ರ ಭಟ್ ಅವರು ವರದರಾಜ ಆದ್ಯ ಬಂಗಾರದ ಪದಕಕ್ಕೆ ಪಾತ್ರರಾಗಿದ್ದಾರೆ ಎಂದು ಮುಂಬಯಿ ವಿಶ್ವವಿದ್ಯಾಲಯ ಪ್ರಕಟನೆಯಲ್ಲಿ ತಿಳಿಸಿದೆ.

ದೀಪಿಕಾ ಭಟ್ ಅವರು ಮೂಲತಃ ಕಾರ್ಕಳ ತಾಲೂಕು ಅಲ್ಲಿನ ಹೆಬ್ರಿ ಸಮೀಪದ ಮುದ್ರಾಡಿ ಗ್ರಾಮ ನಿವಾಸಿ. ಯಕ್ಷಗಾನ ಕಲಾವಿದೆ ಆಗಿರುವ ಇವರು ಅನೇಕ ಕಡೆ ತಮ್ಮ ಪ್ರದರ್ಷನ ನೀಡಿರುತ್ತಾರೆ. ಬಡಗು ತಿಟ್ಟಿನ ಯಕ್ಷಗಾನದ ಮೂಲಕ ಮುಂಬೈ ಹಾಗೂ ಉಡುಪಿ ಯಲ್ಲಿ ಪ್ರದರ್ಷನ ನೀಡುತ್ತಾ ಬಂದಿದ್ದಾರೆ. ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಅಲ್ಲದೇ ಫೋಟೋಗ್ರಾಪಿ ಹಾಗೂ ಕವನ ಬರೆಯುವ ಹವ್ಯಾಸ ಬೆಳೆಸಿ ಕೊಂಡಿದ್ದಾರೆ. ಇವರು ಮುದ್ರಾಡಿ ಉಪ್ಪಳದ ಶ್ರೀಧರ ಕಲ್ಕೂರ ಮತ್ತು ವರಲಕ್ಷಿ ದಂಪತಿ ಸುಪುತ್ರಿ ಆಗಿದ್ದಾರೆ.

Write A Comment