ಕನ್ನಡ ವಾರ್ತೆಗಳು

ಶತಾಯುಷಿ ಪಟೇಲ ನಾರಾಯಣ ರಾವ್ ಮರೋಳಿ ನಿಧನ

Pinterest LinkedIn Tumblr

narayan_rao_nomore

ಮಂಗಳೂರು,ಫೆ.20 ಸ್ವಾತಂತ್ರ್ಯ ಪೂರ್ವದಲ್ಲೂ ಐದಾರು ದಶಕಗಳ ಕಾಲ ಪಟೇಲತನವನ್ನು ನಡೆಸಿದ್ದ ಪಟೇಲ ಮನೆತನದ ಹಿರಿಯ ಹಾಗೂ ಶತಾಯುಷಿ ಮರೋಳಿ ನಾರಾಯಣ ರಾವ್ ಶುಕ್ರವಾರ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಆರು ದಶಕಗಳ ಕಾಲ ಭಾರತೀಯ ಜೀವವಿಮಾ ನಿಗಮದಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನ, ವೀರನಾರಾಯಣ ದೇವಸ್ಥಾನ ಹಾಗೂ ಶ್ರೀ ಕಾಳಮ್ಮ ದೇವಸ್ಥಾನಗಳಲ್ಲೂ ಮೊಕ್ತೇಸರರಾಗಿ ಸೇವೆಗೈದಿದ್ದುರು. ನಿಷ್ಠಾವಂತ ಜೀವನ ನಡೆಸಿದ್ದ ನಾರಾಯಣ ರಾವ್ ಅವರಿಗೆ ೨೦೧೩ರಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ‘ಸಮಾಜ ಸೇವಾ ಸಿರಿ’ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.

ನಾಲ್ವರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿರುವ ನಾರಾಯಣ ರಾವ್ ನಿಧನಕ್ಕೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಸಾಮಾಜಿಕ ನೇತಾರರಾದ ದಾಮೋದರ ನಿಸರ್ಗ, ಎಂ.ಬಿ. ಪುರಾಣಿಕ್ ಮೊದಲಾದವರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿರುವರು.

Write A Comment