ಮೂಡಬಿದಿರೆ,ಫೆ.14 : ಹಿರಿಯ ಕಲಾವಿದ, ನಿವೃತ್ತ ಶಿಕ್ಷಕ ಕೆ.ಚಂದ್ರಶೇಖರ ಭಟ್ ಆದೂರು ಅವರ ಕಲಾ ಸಾಧನೆಯನ್ನು ಗುರುತಿಸಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಯಕ್ಷತುಣೀರ ಸಂಪ್ರತಿಷ್ಠಾನ(ರಿ.)ಸಂಸ್ಥೆಯು ಸನ್ಮಾನಿಸಿ ಗೌರವಿಸಿದೆ.
ನೆಕ್ರಂಪಾರೆ ಸ್ಕಂದ ಪ್ಲಾಸ್ಟಿಕ್ಸ್ ಆವರಣದಲ್ಲಿರುವ ಕಾರ್ತಿಕೇಯ ಸಭಾಂಗಣದಲ್ಲಿ ಎಡನೀರು ಮಠದ ಶ್ರೀಶ್ರೀಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಗೌರವ ಪ್ರದಾನ ಮಾಡಿ ಸನ್ಮಾನಿಸಿದರು.