ಕನ್ನಡ ವಾರ್ತೆಗಳು

ಮಕ್ಕಳ ಸಹಾಯವಾಣಿ, ಚೈಲ್ಡ್‌ಲೈನ್‌ನಿಂದ ‘ ತೆರೆದ ಮನೆ ‘ ಕಾರ್ಯಕ್ರಮ

Pinterest LinkedIn Tumblr

child_line_openhouse_1

ಮಂಗಳೂರು,ಜ.30: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್‌ಲೈನ್-1098 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತೆರೆದ ಮನೆ ಎಂಬ ಕಾರ್ಯಕ್ರಮವನ್ನು, ಜಪ್ಪು ಬಪ್ಪಾಲ್ ಕುಡುಪಾಡಿಯ ಅರುಣ್ ಸುವರ್ಣರವವರ ಮನೆ ರಜನಿ ನಿಲಯದ ವಠಾರದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಮಕ್ಕಳಿಂದ, ಚೈಲ್ಡ್‌ಲೈನ್‌ನ ಭಿತ್ತಿ ಪತಾಕೆಯನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು, ಮಕ್ಕಳ ಸಹಾಯವಾಣಿ, ಚೈಲ್ಡ್‌ಲೈನ್ ಕೇಂದ್ರ ಸಂಯೋಜನಾಧಿ ಕಾರಿಯಾದ ಶ್ರೀ ಸಂಪತ್ ಕಟ್ಟಿರವರು ಪ್ರಸ್ತಾವಿಕವಾಗಿ ಮಾತುಗಳನ್ನಾಡುತ್ತಾ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ-1098 ಗೆ ದೂರವಾ ಣಿ  ಕರೆಯನ್ನು ಮಾಡಿ ದೂರು ನೀಡಬಹುದು, ಚೈಲ್ಡ್‌ಲೈನ್ ದಿನದ 24  ಗಂಟೆಯೂ ಕಾರ್ಯನಿರತವಾಗಿರುತ್ತದೆ ಎಂದ ಅವರು, ಮಕ್ಕಳ ಸಹಾಯವಾಣಿಯ ಕಾರ್ಯಚಟುವಟಿಕೆಯನ್ನು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಪ್ರಮುಖ ಅಂಶಗಳನ್ನು ವಿವರಿಸಿದರು.

child_line_openhouse_5 child_line_openhouse_2 child_line_openhouse_3 child_line_openhouse_4

ಮಹಿಳೆಯರು ಮಕ್ಕಳ ಪಾಲನೆ ಪೋಷಣೆ ಬಗ್ಗೆ ಎಚ್ಚರವಹಿಸಬೇಕು ಹಾಗೂ ಮಲೇರಿಯಾ ರೋಗ ಹರಡದಂತೆ, ಮುಂಜಾಗ್ರತೆಯಾಗಿ, ಪರಿಸರದ ಸ್ವಚ್ಛತೆಯನ್ನು ಕಾಪಾಡುವುದರ ಮೂಲಕ ಆರೋಗ್ಯವಂತ ಕುಟುಂಬ ಜೀವನ ಹಾಗೂ ಮಕ್ಕಳನ್ನು ಸಮಾಜಕ್ಕೆ ನೀಡಬೇಕೆಂದು, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಹಾಗೂ ಮಲೇರಿಯಾ ನಿರ್ಮೂಲನ ಸಂಘಟನೆಯ ಶ್ರೀ ಸುರೇಶ್ ಶೆಟ್ಟಿಯವರು ಮಾಹಿತಿಯನ್ನು ನೀಡಿದರು.

ಅಪರಾಧಗಳು ನಡೆದಾಗ ಹಾಗೂ ಸಂಶಯಿತ ವ್ಯಕ್ತಿಗಳು ತಮ್ಮ ಪರಿಸರದಲ್ಲಿ ಕಂಡುಬಂದಾಗ ತಕ್ಷಣ ಜನಸಾಮಾನ್ಯರು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುವಂತೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಾಗಿದ್ದು, ಸಮಸ್ಯೆಗಳು ಬಂದಾಗ ಮಕ್ಕಳು ಮಹಿಳೆಯರು ಭಯಮುಕ್ತರಾಗಿ ನೇರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ,ಪಾಂಡೇ ಶ್ವರ ಪೊಲೀಸ್ ಠಾಣೆಯ, ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಮಂಜುಳಾರವರು ತಿಳಿಸಿದರು.

child_line_openhouse_10 child_line_openhouse_6 child_line_openhouse_7 child_line_openhouse_8 child_line_openhouse_9

ಸರಕಾರದಿಂದ ಮಕ್ಕಳಿಗಿರುವ ಸವಲತ್ತುಗಳು, ಮಕ್ಕಳ ಕಾವಲು ಸಮಿತಿ, ಮಕ್ಕಳ ಹಕ್ಕುಗಳು, ಮಹಿಳೆಯರ, ಮಕ್ಕಳ ಮಾರಾಟ ಹಾಗೂ ಸಾಗಾಣೆ, ಮಗುವನ್ನು ದತು ಸ್ವೀಕಾರ ಮಾಡುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಶ್ರೀ ಕುಮಾರ್ ಶೆಟ್ಟಿಗಾರ್‌ರವರು ವಿವರವಾದ ಮಾಹಿತಿ ನೀಡಿದರು.

ಕಸ ವಿಲೇವಾರಿಯಾಗದೆ ದುರ್ವಾಸನೆ, ಸೊಳ್ಳೆ ಕಾಟ ಜಾಸ್ತಿಯಾಗಿರುವ ಬಗ್ಗೆ, ಇದನ್ನು ತಡೆಗಟ್ಟುವಂತೆ, ತೆರೆದ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು ಒಳಚರಂಡಿ, ಕುಡಿಯುವ ನೀರು ವ್ಯವಸ್ಥೆಯಿಲ್ಲದಿರುವ ಬಗ್ಗೆ ದೂರಿದರು, ವ್ಯವಸ್ಥೆಗೊಳಿಸುವಂತೆ ಸಭೆಯಲ್ಲಿದ್ದ ಸ್ಥಳೀಯ ಜನರು ಕೇಳಿಕೊಂಡರು, ಗುಂಪು ಚರ್ಚೆಯನ್ನು ಶ್ರೀಮತಿ ರೇವತಿ ಹೊಸಬೆಟ್ಟುರವರು ನಡೆಸಿಕೊಟ್ಟರು. ಕ್ರೋಢಿಕೃತ ಅಂಶಗಳನ್ನು ಮಕ್ಕಳ ಸಹಾಯವಾಣಿಯ ಶ್ರೀನಾಗರಾಜ್ ಪಣಕಜೆರವರು ಸಭೆಯ ಮುಂದೆ ಮಂಡಿಸಿದರು.

child_line_openhouse_10 child_line_openhouse_12

ಮಕ್ಕಳ ಸಹಾಯವಾಣಿ 1098  ಗೆ ಕರೆಯನ್ನು ಮಾಡುವುದರ ಮೂಲಕ ಚೈಲ್ಡ್‌ಲೈನ್‌ನ ಕು|| ಪವಿತ್ರಾ ಜ್ಯೋತಿಗುಡ್ಡೆಯವರು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನಿವೃತ್ತ ಸಹಾಯಕ ಯೋಜನಾಧಿಕಾರಿ ಶ್ರೀ ಅರುಣ್ ಸುವರ್ಣ, ಜಿಲ್ಲಾ ಮಕ್ಕಳ ಸಹಾಯವಾಣಿಯ ನೋಡಲ್ ಸಂಯೋಜನಾಧಿಕಾರಿ ಶ್ರೀ ಯೋಗಿಶ್ ಮಲ್ಲಿಗೆಮಾಡು, ಅಂಗನವಾಡಿ ಶಿಕ್ಷಕಿಯರಾದ ಶ್ರೀಮತಿ ರಾಜೇಶ್ವರಿ.ಎ, ಶ್ರೀಮತಿ ಪದ್ಮಿನಿ, ಸಂತ ಅಲೋಶಿಯಸ್ ಮತ್ತು ರೋಶನಿ ನಿಲಯ ಸ್ನಾತಕೋತ್ತರ ಸಮಾಜ ಕಾರ್ಯ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಣ ಇಲಾಖಾಧಿಕಾರಿಗಳು, ಸಿ.ಆರ್.ಪಿ ಅಧಿಕಾರಿಗಳು, ಸ್ಥಳೀಯ ವಿಧ್ಯಾರ್ಥಿಗಳು ಪೋಷಕರು, ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಆಶಾಲತಾ ಕುಂಪಲರವರು ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಜಯಂತಿ ಕೋಕಳ ಸ್ವಾಗತಿಸಿ, ಶ್ರೀಮತಿ ಅಸುಂತಾ ಡಿ’ಸೋಜರವರು ವಂದಿಸಿದರು.

Write A Comment