ಮಂಗಳೂರು,ಜ.21 : ಕೆಂಜಾರು ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಶ್ರೀದೇವಿ ತಾಂತ್ರಿಕ ಶಿಕ್ಷಣ ಸಂಸ್ಥೆಯ 5 ನೇ ಸಾಲಿನ ಇಂಜಿನಿಯರಿಂಗ್, ಎಂ.ಬಿ.ಎ., ಎಂ.ಸಿ.ಎ ಹಾಗೂ 2 ನೇ ಸಾಲಿನ ಎಂ.ಟೆಕ್ ವಿಭಾಗದ ನೂತನ ಪದವೀಧರ ವಿದ್ಯಾರ್ಥಿಗಳ ‘ಪದವಿ ಪ್ರದಾನ ಸಮಾರಂಭ (ಘಟಿಕೋತ್ಸವ)’ವು ಶನಿವಾರ, ತಾ| 24.01.2015 ರಂದು ಬೆ. 9.45 ಗಂಟೆಗೆ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಜರಗಲಿರುವುದು.
ರಾಜ್ಯ ನಗರಾಭಿವೃದ್ಧಿ ಇಲಾಖೆ ಸಚಿವ ಮಾನ್ಯ ಶ್ರೀ ವಿನಯ ಕುಮಾರ್ ಸೊರಕೆ ಯವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ನೀಡಲಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ| ಪಿ.ಎಸ್. ಯಡಪಡಿತಾಯ ಯವರು ಗೌರವ ಅತಿಥಿಯಾಗಿ ಪಾಲ್ಗೊಂಡು ನೂತನ ಪದವೀಧರರಿಗೆ ಪದವಿ ಪ್ರದಾನ ಮಾಡಲಿರುವರು.
ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಎ. ಸದಾನಂದ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಉಪಾಧ್ಯಕ್ಷರಾದ ಶ್ರೀ ನಿಧೀಶ್ ಶೆಟ್ಟಿ, ಕಾರ್ಯದರ್ಶಿಯವರಾದ ಶ್ರೀಮತಿ ಮೈನಾ ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ಪ್ರಿಯಾಂಕ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಡಾ| ದಿಲಿಪ್ ಕುಮಾರ್ ಹಾಗೂ ಸಂಘಟಕಿಯವರಾದ ಪ್ರೊ| ವಿದ್ಯಾ ಜಿ. ಯವರು ವೇದಿಕೆಯಲ್ಲಿ ಉಪಸ್ಥಿತರಿರುವರು.