ಕನ್ನಡ ವಾರ್ತೆಗಳು

ದ.ಕ ಜಿಲ್ಲೆ ಬಿಜೆಪಿಯ ಸಕ್ರಿಯ ಸದಸ್ಯರ ಸಮಾವೇಶ ಉದ್ಘಾಟನೆ,

Pinterest LinkedIn Tumblr

Bjp_news_photo_1

ಮಂಗಳೂರು,ಜ.20: ನರೇಂದ್ರ ಮೋದಿಜೀಯವರ ಪ್ರಖರ ನೇತ್ರತ್ವಕ್ಕೆ ಮನಸೋತು ಅನೇಕ ಪ್ರಮುಖರು ಅನ್ಯಾನ್ಯ ಪಕ್ಷಗಳಿಂದ ಭಾ.ಜ.ಪಾ. ವನ್ನು ಸೇರುವ ಪರಿಯನ್ನು ನೋಡಿದರೆ ಅತೀ ಶೀಘ್ರದಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗುವ ದಿನಗಳು ಇನ್ನು ದೂರವಿಲ್ಲ, ಇದಕ್ಕೆ ಇತ್ತಿಚೆಗೆ ನಡೆದ ಚುಣಾವಣೆಗಳೇ ಸಾಕ್ಷಿ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷರಾದ ಪ್ರತಾಪ್ ಸಿಂಹ ನಾಯಕ್ ಹೇಳಿದ್ದಾರೆ.

Bjp_news_photo_3

ಅವರು ಡೊಂಗರಕೇರಿಯ ಕಾಶೀಸದನದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಮಂಗಳೂರು ಇದರ ನಗರ ದಕ್ಷಿಣದ ಸಕ್ರಿಯ ಸದಸ್ಯರ ಸಮಾವೇಶ ಉದ್ಘಾಟಿಸಿ ಮಾತಾಡುತ್ತಿದ್ದರು.
ನಂತರ ಮಾತಾಡಿದ ಅವರು ಭಾ.ಜ.ಪಾ.ವನ್ನು ಸುಭದ್ರವಾಗಿ ದೇಶದಲ್ಲಿ ನೆಲೆಯೂರಿಸಲು ಮುಂದಿನ ಎರಡು ತಿಂಗಳುಗಳಲ್ಲಿ ಭಾ.ಜ.ಪಾ.ದ ಎಲ್ಲಾ ಕಾರ್ಯಕರ್ತರು ಸದಸ್ಯತಾ ಅಭಿಯಾನವನ್ನು ಮನೆ ಮೆನೆಗೆ ತೆರಳಿ ಮೊಬೈಲಿನಲ್ಲಿ ಟೊಲ್ ಫ್ರೀ ಸಂಖ್ಯೆಯಾದ 18002662020 ಕ್ಕೆ ಡಯಲ್ ಮಾಡಿಸುವ ಮೂಲಕ ಸದಸ್ಯರನ್ನಾಗಿ ಮಾಡಬೇಕೆಂದು ಕರೆ ನೀಡಿದರು.

ಮಂಗಳೂರು ನಗರ ದಕ್ಷಿಣ ಮಂಡಲದ ಅದ್ಯಕ್ಷ ಶ್ರೀ ರವಿಶಂಕರ್ ಮಿಜಾರ್ ರವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಭಾ.ಜ.ಪಾ.ದ ಮುಖಂಡರಾದ ಶ್ರೀ ಉಮಾನಾಥ್ ಕೋಟ್ಯಾನ್, ಶ್ರೀ ನಿತಿನ್ ಕುಮಾರ್, ಶ್ರೀ ಮೊನಪ್ಪ ಭಂಡಾರಿ, ಮಾಜೀ ಉಪ ಸಭಾದ್ಯಕ್ಷ ಶ್ರೀ ಎನ್ ಯೋಗೀಶ್ ಭಟ್, ರಾಜ್ಯ ಪರಿಷತ್ ಸದಸ್ಯೆ ಶ್ರೀಮತಿ ಪ್ರಭಾ ಮಾಲಿನಿ, ಮ.ನ.ಪಾ. ವಿರೋದ ಪಕ್ಷದ ನಾಯಕ ಶ್ರೀ ಪ್ರೇಮಾನಂದ ಶೆಟ್ಟಿ, ಭಾ.ಜ.ಪಾ. ಮಂ.ನ. ದಕ್ಷಿಣದ ಪ್ರಧಾನ ಕಾರ್ಯದರ್ಶಿ ಶ್ರೀ. ವೇದವ್ಯಾಸ್ ಕಾಮತ್, ಸದಸ್ಯತಾ ಅಭಿಯಾನ ಪ್ರಮುಖರಾದ ಶ್ರೀ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

Bjp_news_photo_2a

ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೂಪಾ ಡಿ. ಬಂಗೇರ ರವರು ವಂದೇ ಮಾತರಂ ಹಾಡಿದರು.ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಸುಧೀರ್ ಶೆಟ್ತಿ ಕಣ್ಣೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

Write A Comment