ಕುಂದಾಪುರ: ಪತ್ರಕರ್ತನಿಬ್ಬನ ಬೈಕಿಗೆ ಶಾಲಾವಾಹನವೊಂದು ಡಿಕ್ಕಿಯಾದ ಪರಿಣಾಮ ಗಾಯಗಳಾದ ಘಟನೆ ಹೆಮ್ಮಾಡಿ ಗ್ರಾಮದ ಸಂತೋಷನಗರ ಎಂಬಲ್ಲಿ ಬುಧವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಸಂಗ್ರಾಮಧ್ವನಿ ಪತ್ರಿಕೆಯ ವರದಿಗಾರ ದಯಾನಂದ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ದಯಾನಂದ ಅವರು ಬುಧವಾರ ಬೆಳಿಗ್ಗೆ ತಮ್ಮ ಬೈಕಿನಲ್ಲಿ ತ್ರಾಸಿಯಿಂದ ಕುಂದಾಪುರಕ್ಕೆ ಬರುತ್ತಿದ್ದರು. ಬೆಳಿಗ್ಗೆ ಸುಮಾರು ೮.೫೦ರ ಸಂದರ್ಭ ಹೆಮ್ಮಾಡಿಯ ಸಂತೋಷನಗರ ತಿರುವು ಬಳಿಯಲ್ಲಿ ಅವರ ಹಿಂದಿನಿಂದ ಬಂದ ಖಾಸಗೀ ಶಾಲಾ ವಾಹನವೊಂದನ್ನು ಅದರ ಚಾಲಕ ಸುಧೀರ್ ಎಂಬಾತ ಅತೀ ವೇಗದಲ್ಲಿ ಚಲಾಯಿಸಿಕೊಂಡು ಬಂದು ಎಡಬದಿಯಿಂದ ಓವರ್ ಟೇಕ್ ಮಾಡಿ ಏಕಾಏಕೀ ಬಲಬದಿಗೆ ಬಂದ ಪರಿಣಾಮ ಬೈಕಿಗೆ ಡಿಕ್ಕಿಯಾಗಿದೆ. ಈ ಸಂದರ್ಭ ದಯಾನಂದ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಮೈಕೈಗೆ ಗಾಯಗಳಾಗಿವೆ ಎಂದು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.