ಕನ್ನಡ ವಾರ್ತೆಗಳು

ಶ್ರೀ ಗೋಕರ್ಣನಾಥೇಶ್ವರ ಕಾಲೇಜು : ಮೂರು ದಿನಗಳ ಅಂತರ ಕಾಲೇಜು ಪುರುಷರ ಕಬಡ್ಡಿ ಪಂದ್ಯಾಟ ಆರಂಭ

Pinterest LinkedIn Tumblr

Gokrn_Colg_Kabadi_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಮತ್ತು ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮೂರು ದಿನಗಳ ಅಂತರ ಕಾಲೇಜು ಪುರುಷರ ಕಬಡ್ಡಿ ಪಂದ್ಯಾಟ – 2014 -15, ಬುಧವಾರ ನಗರದ ಉರ್ವಾ ಮೈದಾನದಲ್ಲಿ ಆರಂಭಗೊಂಡಿತ್ತು.

ಹೋಟೆಲ್ ದೀಪಾ ಕಂಫರ್ಟ್ಸ್‌ನ ನಿರ್ದೇಶಕರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ಹಾಗೂ ದೇವಗಿರಿ ಟೀ ಸಂಸ್ಥೆಯ ಮಾಲಕರು, ಚಾರ್ಟರ್ಡ್ ಅಕೌಂಟೆಂಟ್ ಶ್ರೀ ನಂದಗೋಪಾಲ್ ಶೆಣೈ ದೀಪ ಪ್ರಜ್ವಲನಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅತಿಥಿಗಳು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಕಬಡಿ ಪಂದ್ಯಾಟಕ್ಕೆ ಚಾಲನೆ ನೀಡಿದರು.

Gokrn_Colg_Kabadi_2 Gokrn_Colg_Kabadi_3 Gokrn_Colg_Kabadi_4 Gokrn_Colg_Kabadi_5 Gokrn_Colg_Kabadi_6 Gokrn_Colg_Kabadi_7

ಈ ಸಂದರ್ಭ ಮಾತನಾಡಿದ ನಂದಗೋಪಾಲ್ ಶೆಣೈ ಅವರು, ಕಬಡಿ ಪಂದ್ಯಾಟ ( ಮೇಕ್ ಇಂಡಿಯಾ ಕಾನ್ಸೆಪ್ಟ್) ಸ್ವದೇಶಿ ಆಟವಾಗಿದ್ದು, ಇಂದು ಹೆಚ್ಚಿನ ಬೆಳವಣಿಗೆ ಹಾಗೂ ಅವಕಾಶಗಳನ್ನು ಕಂಡಿವೆ. ಇಂದಿನ ಯುವ ಸಮೂಹ ಇಂತಹ ಅವಕಾಶಗಳನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಂಡು ಕಬಡಿ ಪಂದ್ಯಾಟಕ್ಕೆ ಪ್ರೋತ್ಸಾಹ ನೀಡಿ ತಮ್ಮ ಪ್ರತಿಭೆಯನ್ನು ಈ ಮೂಲಕ ಬೆಳಕಿಗೆ ತರಬೇಕು ಎಂದು ಕರೆ ನೀಡಿದರು.

ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಂಚಾಲಕರಾದ ಶ್ರೀ ಎಸ್. ಜಯವಿಕ್ರಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Gokrn_Colg_Kabadi_8 Gokrn_Colg_Kabadi_9 Gokrn_Colg_Kabadi_10 Gokrn_Colg_Kabadi_11

ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾನಿರ್ದೇಶಕ ಡಾ| ಕಿಶೋರ್‍ ಕುಮಾರ್, ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ನವೀನ್ ಚಂದ್ರ, ಶ್ರೀ ವೆಂಕಟೇಶ್ ಶಿವಭಕ್ತಿಯೋಗ ಸಂಘದ ಕಾರ್ಯದರ್ಶಿ ಶ್ರೀ ವಸಂತ ಕಾರಂದೂರು, ಸಂಘದ ಸದಸ್ಯರಾದ ಶ್ರೀ ಪದ್ಮನಾಭ ಕೋಟ್ಯಾನ್, ಶ್ರೀ ನಾರಾಯಣ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಡಾ| ಬಿ.ಜಿ ಸುವರ್ಣ, ಬಿ.ಪಿ.ಹರೀಶ್ ಕುಮಾರ್, ಕಾಲೇಜಿನ ದೈಹಿಕ ಶಿಕ್ಷಕರಾದ ( ನಿರ್ದೇಶಕರು) ಶ್ರೀ ಪುರುಷೋತ್ತಮ ಪೂಜಾರಿ ಬಿ, ಶ್ರೀ ಸಂದೀಪ್ ರಾವ್ ಮುಂತಾದವರು ಅತಿಥಿಗಳಾಗಿದ್ದರು.

Gokrn_Colg_Kabadi_12 Gokrn_Colg_Kabadi_13 Gokrn_Colg_Kabadi_14 Gokrn_Colg_Kabadi_15 Gokrn_Colg_Kabadi_16 Gokrn_Colg_Kabadi_17 Gokrn_Colg_Kabadi_18 Gokrn_Colg_Kabadi_19 Gokrn_Colg_Kabadi_20 Gokrn_Colg_Kabadi_21 Gokrn_Colg_Kabadi_22 Gokrn_Colg_Kabadi_23 Gokrn_Colg_Kabadi_24 Gokrn_Colg_Kabadi_25Gokrn_Colg_Kabadi_26 Gokrn_Colg_Kabadi_27 Gokrn_Colg_Kabadi_28 Gokrn_Colg_Kabadi_29 Gokrn_Colg_Kabadi_30 Gokrn_Colg_Kabadi_31 Gokrn_Colg_Kabadi_32 Gokrn_Colg_Kabadi_33 Gokrn_Colg_Kabadi_34 Gokrn_Colg_Kabadi_35 Gokrn_Colg_Kabadi_36 Gokrn_Colg_Kabadi_37 Gokrn_Colg_Kabadi_38 Gokrn_Colg_Kabadi_39 Gokrn_Colg_Kabadi_40 Gokrn_Colg_Kabadi_41 Gokrn_Colg_Kabadi_42 Gokrn_Colg_Kabadi_43 Gokrn_Colg_Kabadi_44 Gokrn_Colg_Kabadi_45

ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ| ಗಂಗಾಧರ್.ಬಿ ಸ್ವಾಗತಿಸಿದರು. ಅಸೋಸಿಯೇಟ್ ಪ್ರೊಫೆಸರ್ ಡಾ| ಉಮ್ಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಉಪನ್ಯಾಸಕ ಡಾ.ದಿನಕರ್ ಎಸ್.ಪಚ್ಚನಾಡಿ ವಂದಿಸಿದರು.

Gokrn_Colg_Kabadi_46 Gokrn_Colg_Kabadi_47 Gokrn_Colg_Kabadi_48 Gokrn_Colg_Kabadi_49 Gokrn_Colg_Kabadi_50 Gokrn_Colg_Kabadi_51 Gokrn_Colg_Kabadi_52 Gokrn_Colg_Kabadi_53 Gokrn_Colg_Kabadi_54 Gokrn_Colg_Kabadi_55 Gokrn_Colg_Kabadi_56 Gokrn_Colg_Kabadi_57 Gokrn_Colg_Kabadi_58 Gokrn_Colg_Kabadi_59 Gokrn_Colg_Kabadi_60 Gokrn_Colg_Kabadi_61 Gokrn_Colg_Kabadi_62 Gokrn_Colg_Kabadi_63 Gokrn_Colg_Kabadi_64 Gokrn_Colg_Kabadi_65 Gokrn_Colg_Kabadi_66 Gokrn_Colg_Kabadi_67

40 ತಂಡಗಳು :

ಮಡಿಕೇರಿ, ಕುಶಾಲನಗರ, ಸೋಮವಾರ ಪೇಟೆ, ತೆಂಕನಡಿಯೂರು, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದಿರೆ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಉಜಿರೆ ಸೇರಿದಂತೆ ಮಂಗಳೂರು ಹಾಗೂ ಸುತ್ತಮುತ್ತಲಿನ ಕಾಲೇಜುಗಳ ಸುಮಾರು 40 ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ದಿನಾಂಕ 09-01-2015ರ ಶುಕ್ರವಾರದಂದು ಸಂಜೆ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಗುವುದು.

 

Write A Comment