ಕನ್ನಡ ವಾರ್ತೆಗಳು

ಮಲ್ಲಿಕಟ್ಟೆ : ಬಸ್ ಚಾಲಕನ ನಿರ್ಲಕ್ಷತೆಯಿಂದ ಸರಣಿ ಅಪಘಾತ – ನಾಲ್ವರಿಗೆ ಗಾಯ.

Pinterest LinkedIn Tumblr

bus_acident_mallikatte1

ಮಂಗಳೂರು, ಡಿ.29 : ರವಿವಾರ ಅಪರಾಹ್ನ ಚಾಲಕನ ನಿರ್ಲಕ್ಷತೆಯಿಂದ ಚಲಿಸಿದ ಬಸ್ ಸರಣಿ ಅಪಘಾತ ನಡೆಸಿ 4 ಮಂದಿಯನ್ನು ಗಾಯಗೊಳಿಸಿದ ಘಟನೆ ನಗರದ ಮಲ್ಲಿಕಟ್ಟೆಯ ಬಳಿ ನಡೆದಿದೆ.

ಗಾಯಗೊಂಡವರನ್ನು ರಾಬರ್ಟ್, ಹೆರಿಕ್, ಎಡ್ಮಿನ್ ಮುಂತೇರೋ, ಅಸ್ಮಿತಾ ಎಂದು ಗುರುತಿಸಲಾಗಿದೆ.

bus_acident_mallikatte3 bus_acident_mallikatte4 bus_acident_mallikatte2

ಅಡ್ಯಾರ್ ಕಡೆಯಿಂದ ನಂತೂರು ಮಾರ್ಗವಾಗಿ ಮಲ್ಲಿಕಟ್ಟೆಗೆ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ 3 ಬೈಕ್ ಮತ್ತು 4 ಕಾರು ಸಹಿತ 8 ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಇದರಿಂದ ನಾಲ್ಕು ಮಂದಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕದ್ರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment