ಕನ್ನಡ ವಾರ್ತೆಗಳು

ಅಣ್ಣ ತಂಗಿ ಎಂದು ಲಾಡ್ಜ್ ಪಡೆದ ಯುವ ಜೋಡಿ ಪೊಲೀಸ್ ವಶ : ಮಾನಭಂಗ ದೂರು

Pinterest LinkedIn Tumblr

Lodge_ride_arest

ಕೊಕ್ಕಡ : ಕೊಕ್ಕಡ ಜೋಡುಮಾರ್ಗದ ಬಳಿ ಇರುವ ಲಾಡ್ಜೊಂದಕ್ಕೆ ದಾಳಿ ನಡೆಸಿದ ಉಪ್ಪಿನಂಗಡಿ ಸಬ್ ಇನ್ಸ್‌ಪೆಕ್ಟರ್ ಜಗದೀಶ ರೆಡ್ಡಿ ಮತ್ತು ನೆಲ್ಯಾಡಿ ಹೊರಠಾಣೆಯ ಪೊಲೀಸರು ಯುವ ಜೋಡಿಯೊಂದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಸುಳ್ಯದ ಪಾಲಿಟೆಕ್ನಿಕ್ ವಿದ್ಯಾರ್ಥಿನಿ, ಕಡಬ ಕಳಾರ ಬಳಿಯ ಯುವತಿ ಹಾಗೂ ರಾಮಕುಂಜ ಕೆದಿಲ ನಿವಾಸಿ ಪವನ್ ಕುಮಾರ್ ಭಂಡಾರಿ ಸಿಕ್ಕಿಬಿದ್ದ ಜೋಡಿಗಳು.

ಮಂಗಳವಾರ ಬೆಳಗ್ಗೆ ಬೈಕ್‌ನಲ್ಲಿ ಬಂದ ಈ ಜೋಡಿ ಕೊಠಡಿ ಬುಕ್ ಮಾಡಿದೆ. ಬುಕ್ಕಿಂಗ್ ವೇಳೆ ಪವನ್ ಕುಮಾರ್ ಯುವತಿ ತನ್ನ ತಂಗಿಯೆಂದೂ ಈ ಕೊಠಡಿಗೆ ಇನ್ನೂ ನಾಲ್ವರು ಸಂಬಂಧಿಕರು ಬರಲಿದ್ದಾರೆಂದೂ ಹೇಳಿದ್ದ.

ಕಡಬ ಪರಿಸರದ ಸಾರ್ವಜನಿಕರು ಈತನ ಚಲನವಲನಗಳ ಮೇಲೆ ಅದಾಗಲೇ ಕಣ್ಣಿಟ್ಟಿದ್ದರು. ಆತ ಕೊಕ್ಕಡದಲ್ಲಿ ಠಳಾಯಿಸಿರುವ ಮಾಹಿತಿ ಪಡೆದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಯುವ ಜೋಡಿಯನ್ನು ವಶಕ್ಕೆ ತೆಗೆದುಕೊಂಡರು.

ವಿಚಾರಣೆ ವೇಳೆ ಯುವತಿ, ತನಗೆ ತಪ್ಪು ಮಾಹಿತಿ ನೀಡಿ ಪವನ್ ಕುಮಾರ್ ಕರೆದುಕೊಂಡು ಬಂದಿದ್ದಾನೆ. ಬೈಕ್‌ನಲ್ಲಿ ಜಾಲಿ ರೈಡ್ ಹೋಗೋಣ ಎಂದು ಕೊಠಡಿಗೆ ಕರೆ ತಂದಿದ್ದಾನೆ ಎಂದು ತಿಳಿಸಿರುವ ಯುವತಿ ಪವನ್ ಕುಮಾರ್. ವಿರುದ್ಧ ಮಾನಭಂಗಕ್ಕೆ ಯತ್ನಿಸಿದ ದೂರು ನೀಡಿದ್ದಾಳೆ.

ಈ ಮಧ್ಯೆ ವಸತಿಗೃಹದಲ್ಲಿ ಅನ್ಯ ಕೋಮಿನ ಜೋಡಿ ಸಿಕ್ಕಿ ಬಿದ್ದಿದ್ದಾರೆ ಎಂಬ ಸುದ್ದಿ ಹಬ್ಬಿ ಜನ ಜಮಾಯಿಸಿದರು. ಪೊಲೀಸರು ಪರಿಸ್ಥಿತಿಯ ವಿವರ ನೀಡಿ ವಾತಾವರಣ ತಿಳಿಗೊಳಿಸಿದರು. ಪವನ್ ಕುಮಾರ್ ಭಂಡಾರಿ ಹಲವು ಪ್ರಕರಣಗಳಲ್ಲಿ ಈ ಹಿಂದೆಯೂ ಕಾಣಿಸಿಕೊಂಡಿದ್ದು ಹುಡುಗಿಯರನ್ನು ದಾರಿ ತಪ್ಪಿಸಿ ದಂಧೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ

Write A Comment