ಕನ್ನಡ ವಾರ್ತೆಗಳು

ಕಾಪು: ಅನಿವಾಸಿ ಭಾರತೀಯ ನಿಗೂಢ ಸಾವು; ಸಂಬಧಿಕರಿಂದ ಪೊಲೀಸರಿಗೆ ದೂರು

Pinterest LinkedIn Tumblr

crime_writing_english

ಉಡುಪಿ: ಸ್ನೇಹಿತರ ಜತೆ ಸ್ವಂತ ಮನೆಗೆ ಬಂದಿದ್ದ ಅನಿವಾಸಿ ಭಾರತೀಯ ವ್ಯಕ್ತಿ ಹದಯಾಘಾತದಿಂದ ಮೃತಪಟ್ಟಿದ್ದು, ಸಂಬಂಧಿಕರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕಾಪು ಸಮೀಪದ ಮೂಳೂರು ಸಮುದ್ರ ತಟದಲ್ಲಿನ ಮನೆಯೊಂದರಲ್ಲಿ ನಡೆದಿದೆ.

20 ವರ್ಷಗಳಿಂದ ಪ್ರಾನ್ಸ್‌ನಲ್ಲಿ ಸಂಸಾರ ಸಮೇತ ವಾಸವಿದ್ದ ಪಿಸಾರಿ ರವೀಶ್ ಎಂಬವರು ಕಳೆದ ತಿಂಗಳು ವಿದೇಶದಿಂದ ಊರಿಗೆ ಬಂದಿದ್ದವರು ನವೆಂಬರ್ 25ರಂದು ಮೂಳೂರು ಸಮುದ್ರ ತಟದಲ್ಲಿದ್ದ ತನ್ನ ಸ್ವಂತ ಮನೆಗೆ ತಮ್ಮ ಸ್ನೇಹಿತರ ಜತೆ ಬಂದಿದ್ದರು. ಇದೆ ಮನೆಯಲ್ಲಿ ಮೃತಪಟ್ಟಿದ್ದಾರೆ.

ಸೋಮವಾರ ಇವರ ಸಹೋದರ ಸಂಬಂಧಿ ಸಂತೋಷ್ ಎಂಬವರು ಬೆಂಗಳೂರಿನಲ್ಲಿರುವ ಮೃತರ ಸಹೋದರ ರಾಜೇಶ್ ರಾವ್ ಅವರಿಗೆ ಫೋನ್ ಮಾಡಿ ಸಾವಿನ ಸುದ್ದಿ ಮುಟ್ಟಿಸಿದ್ದರು. ಬೆಂಗಳೂರಿನಿಂದ ಬಂದ ಸಂಬಂಧಿಕರು ಈ ಬಗ್ಗೆ ರವೀಶ್ ಅವರ ಗೆಳೆಯ ಕಿರಣ್ ಎಂಬವರಲ್ಲಿ ವಿಚಾರಿದಾಗ ಆತ ಹೃದಯಾಘಾತಗೊಂಡು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಆದರೆ ಶವದ ಹಣೆಯಲ್ಲಿ ತರಚಿದ ಗಾಯವಿದ್ದು ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಇದು ಸಂಶಯ ಮೂಡಿಸಿದೆ.

ಮೃತರ ಸಹೋದರ ರಾಜೇಶ್ ರಾವ್ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಕಾಪು ಠಾಣೆಯಲ್ಲಿ ದೂರು ನೀಡಿದ್ದು ಅಸಹಜ ಸಾವು ಪ್ರಕರಣ ದಾಖಲಾಗಿದೆ.

Write A Comment