ಕನ್ನಡ ವಾರ್ತೆಗಳು

ದೇವಸ್ಥಾನಕ್ಕೆಂದು ಹೋದ 19ರ ಯುವತಿ ನಾಪತ್ತೆ

Pinterest LinkedIn Tumblr

missing_boy_hostel

ಕುಂದಾಪುರ: ಕೋಟದ ದೇವಸ್ಥಾನಕ್ಕೆ ಹೋಗಿಬರುವುದಾಗಿ ಮನೆಯಲ್ಲಿ ಕಾರಣ ಹೇಳಿ ಹೋದ ಯುವತಿಯೋರ್ವಳು ನಾಪತ್ತೆಯಾದ ಘಟನೆ ವರದಿಯಾಗಿದೆ.

ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಬೇಳೂರು ಹೈಸ್ಕೂಲ್ ಸಮೀಪದ ಮುಳ್ಳಗುಡ್ಡೆ ೫ ಸೆಂಟ್ಸ್ ನಿವಾಸಿ ಸೌಮ್ಯ (19) ಎನ್ನುವಾಕೆಯೇ ಮನೆಯಿಂದ ನಾಪತ್ತೆಯಾದವಳಾಗಿದ್ದಾಳೆ.
ಶುಕ್ರವಾರ ಬೆಳಿಗ್ಗೆ ಮನೆಯಲ್ಲಿ ಕೋಟ ಅಮ್ರಥೇಶ್ವರೀ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋದ ಈಕೆ ಮನೆಗೆ ಬಾರದೇ ಕಾಣೆಯಾಗಿದ್ದಾಳೆ.

ಮಗಳ ಕಾಣೆಯ ಬಗ್ಗೆ ಆತಂಕಕ್ಕೊಳಗಾದ ಯುವತಿಯ ತಂದೆ ಸ್ವಾಮಿ ಕೋಟ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಕೋಟ ಪೊಲೀಸರು ಈ ಬಗ್ಗೆ ಹುಡುಗಿ ಕಾಣೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕವಷ್ಟೇ ಇನ್ನಷ್ಟು ಮಾಹಿತಿಗಳು ಹೊರಬೀಳಬೇಕಾಗಿದೆ.

Write A Comment