ಕನ್ನಡ ವಾರ್ತೆಗಳು

ಸದಸ್ಯತಾ ಅಭಿಯಾನ ಕಾರ್ಯಾಗಾರ : ಮಂಗಳೂರು ದಕ್ಷಿಣ ಮಂಡಲ

Pinterest LinkedIn Tumblr

bjp_member-ship_2

ಮಂಗಳೂರು,ನ.22 : ಪ್ರಧಾನಿ ನರೇಂದ್ರ ಮೋದಿಯವರ ನಡೆ-ನುಡಿಗಳನ್ನು ದೇಶವಾಸಿಗಳು ಪ್ರತೀ ಕ್ಷಣವೂ ಕಾತರದಿಂದ ಗಮನಿಸುತ್ತಿದ್ದಾರೆ. ದೇಶಕ್ಕೆ ಒಳ್ಳೆಯ ದಿನಗಳು ಅನುಭವಕ್ಕೆ ಬರುತ್ತಿದ್ದು ನರೇಂದ್ರ ಮೋದಿಯವರು ವಿಶ್ವ ನಾಯಕರಾಗಿ ಗುರುತಿಸಿಕೊಳ್ಳಲಿದ್ದಾರೆ ಎಂದು ವಿಧಾನಸಭೆಯ ಮಾಜಿ ಉಪಸಭಾಪತಿ ಎನ್.ಯೋಗೀಶ್ ಭಟ್ ಅಭಿಪ್ರಾಯಿಸಿದರು. ಅವರು ಜಗನ್ನಾಥ ರಾವ್ ಜೋಷಿ ಸೌಧದಲ್ಲಿ ಜರುಗಿದ ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲದ ಕಾರ್ಯಕರ್ತರಿಗಾಗಿ ಸದಸ್ಯತಾ ಅಭಿಯಾನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

bjp_member-ship_1

ವಿಶ್ವದಲ್ಲಿಯೇ ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದುವ ಪಕ್ಷದ ಅಭಿಲಾಷೆಯೊಂದಿಗೆ ಪ್ರಾರಂಭಗೊಂಡ ಸದಸ್ಯತಾ ಅಭಿಯಾನದಲ್ಲಿ ಕಾರ್ಯಕರ್ತರು ಭಾಗವಹಿಸುವುದೇ ಒಂದು ಸುಯೋಗ ಎಂದರು. ಪ್ರಸ್ತಾವನೆಗೈದ ಜಿಲ್ಲಾ ಕಾರ್ಯದರ್ಶಿ ಅಶೋಕ್ ಪಕ್ಷವು ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿಯಾಗಿ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಕಾರ್ಯಕರ್ತರು ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕೆಂದು ಕರೆ ಇತ್ತರು.

ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರವಿಶಂಕರ್ ಮಿಜಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಪ್ರ.ಕಾರ್ಯದರ್ಶಿ/ಸದಸ್ಯತಾ ಅಭಿಯಾನದ ಜಿಲ್ಲಾ ಪ್ರಮುಖ ಸಂಜೀವ ಮಠಂದೂರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸದಸ್ಯತಾ ಅಭಿಯಾನದ ಜವಾಬ್ದಾರಿಯನ್ನು ಘೋಷಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ಎ.ಉಮಾನಾಥ ಕೋಟ್ಯಾನ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರಭಾಮಾಲಿನಿ, ರಾಜ್ಯ ಹಿಂದುಳಿದ ವರ್ಗ ಮೋರ್ಚಾದ ಉಪಾಧ್ಯಕ್ಷ ನಿತಿನ್ ಕುಮಾರ್, ಸದಸ್ಯತಾ ಅಭಿಯಾನದ ಸಹಪ್ರಮುಖ್ ಕ್ಯಾ|ಬ್ರಿಜೆಶ್ ಚೌಟ ಉಪಸ್ಥಿತರಿದ್ದರು.

ಪ್ರ.ಕಾರ್ಯದರ್ಶಿ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಅರುಣ್ ಶೇಟ್ ವಂದೇಮಾತರಂ ಹಾಡಿದರು. ರಮೇಶ್ ಕಂಡೆಟ್ಟು ವಂದಿಸಿದರು. ನ್ಯಾಯವಾದಿ ರವೀಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Write A Comment