ಕನ್ನಡ ವಾರ್ತೆಗಳು

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಬಾಳ ಆಯ್ಕೆ

Pinterest LinkedIn Tumblr

Jagannat_shetty_bala

ಮಂಗಳೂರು : ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2014-2017ನೇ ಸಾಲಿನ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

1014-2017ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ.

ಉಪಾಧ್ಯಕ್ಷರುಗಳಾಗಿ ಸುಕೇಶ್ ಕುಮಾರ್, ಸುಧಾಕರ ಎರ್ಮಾಳ್, ಕೆ.ವಿಲ್‌ಪ್ರೆಡ್ ಡಿ’ಸೋಜ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯದರ್ಶಿಯಾಗಿ ವೆಂಕಟೇಶ್ ಬಂಟ್ವಾಳ್ ಹಾಗೂ ಕೋಶಾಧಿಕಾರಿಯಾಗಿ ಇಬ್ರಾಹಿಂ ಅಡ್ಕಸ್ಥಳ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ. ರವೀಂದ್ರ ಶೆಟ್ಟಿ , ರಾಮಕೃಷ್ಣ ಆರ್, ಕಿರಣ್ ಯು ಸಿರ್ಸಿಕರ್, ಹಿಲರಿ ಕ್ರಾಸ್ತ , ವೇಣು ವಿನೋದ್ ಕೆ.ಎಸ್, ಅನ್ಸಾರ್ ಇನೋಳಿ, ಸುರೇಶ್ ಡಿ. ಪಳ್ಳಿ , ನರೇಶ್ ಕುಮಾರ್ ಸಸಿಹಿತ್ಲು , ನರೇಂದ್ರ ಕೆರೆಕಾಡು , ಜಿತೇಂದ್ರ ಕುಂದೇಶ್ವರ , ಶರತ್ ಶೆಟ್ಟಿ , ಆರ್. ಎ. ಲೋಹಾನಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ರವಿ ಪ್ರಸಾದ್ ಕಮಿಲ ಕಾರ್ಯ ನಿರ್ವಹಿಸಿದ್ದರು.

Write A Comment