ಕನ್ನಡ ವಾರ್ತೆಗಳು

ವಿದ್ಯಾರ್ಥಿನಿ ನಾಪತ್ತೆ : ಬಸ್ ಕಂಡಕ್ಟರ್‌ ಮೇಲೆ ಅಪಹರಣ ಪ್ರಕರಣ ದಾಖಲು

Pinterest LinkedIn Tumblr

Student_Insa_kidnap

ಉಳ್ಳಾಲ : ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಬಿಬಿ‌ಎಂ ವಿದ್ಯಾರ್ಥಿನಿಯೊಬ್ಬಳು ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದು, ಆಕೆಯನ್ನು ಬಸ್ ಕಂಡಕ್ಟರ್ ಅಪಹರಿಸಿರುವ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವಿದ್ಯಾರ್ಥಿನಿಯ ಹೆತ್ತವರು ಪ್ರಕರಣ ದಾಖಲಿಸಿದ್ದಾರೆ.

ಕೋಟೆಕಾರು ನಿವಾಸಿ ಇನ್ಸಾ ಖಲೀಲ್ (19) ನಾಪತ್ತೆಯಾದ ವಿದ್ಯಾರ್ಥಿನಿ. ಈಕೆ ಸಂತ ಆಗ್ನೇಸ್ ಕಾಲೇಜು ಮಂಗಳೂರಿನಲ್ಲಿ ಮೊದಲ ವರ್ಷದ ಬಿಬಿ‌ಎಂ ವಿದ್ಯಾರ್ಥಿನಿಯಾಗಿದ್ದು ನ.19 ರಂದು ಕಾಲೇಜಿಗೆಂದು ತೆರಳಿದಾಕೆ ನಾಪತ್ತೆಯಾಗಿದ್ದಾಳೆ.

ಆದರೆ ಇದೀಗ ತಲಪಾಡಿ – ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ ಕಂಡಕ್ಟರ್ ಇರಾ ನಿವಾಸಿ ಭರತ್ ರಾಜ್ (28) ಎಂಬಾತನೂ ನಾಪತ್ತೆಯಾಗಿದ್ದು, ಇಬ್ಬರೂ ಜತೆಯಾಗಿಯೇ ತೆರಳಿರುವ ಶಂಕೆಯಿಂದ ಆಕೆಯನ್ನು ಭರತ್‌ರಾಜ್‌ ಅಪಹರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಭರತ್‍ರಾಜ್ ಮಂಗಳೂರು-ತಲಪಾಡಿ ನಡುವೆ ಸಂಚರಿಸುವ 42 ನಂಬ್ರ ಸಿಟಿ ಬಸ್‍ನಲ್ಲಿ ನಿರ್ವಾಹಕನಾಗಿದ್ದ. ಇನ್ಸಾ ಖಲೀಲ್ ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಒಂದು ವರ್ಷದಿಂದ ಇಬ್ಬರಿಗೂ ಪರಿಚಯವಿತ್ತು. ಈಕೆ ಪ್ರತಿ ದಿನ ಭರತ್‌ರಾಜ್‌ ಕೆಲಸ ಮಾಡುತ್ತಿದ್ದ ಬಸ್‌ನಲ್ಲಿ ಸಂಚರಿಸುತ್ತಿದ್ದಳೆನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Write A Comment