ಮಂಗಳೂರು: ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಕುಟುಂಬದ 8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದು ಚರಂಡಿಗೆಸೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ಮೂಲದ ನಾಲ್ವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ನ.24 ಬುಧವಾರ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ.

ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆಸಿ ಹತ್ಯೆ ನಡೆಸಿದ ಆರೋಪಿಗಳಾದ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜಾಯ್ಬನ್ ಸಿಂಗ್ ( 21 ) ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಮುಖೇಶ್ ಸಿಂಗ್ (20 ) ಜಾರ್ಖಂಡ್ ನ ರಾಂಚಿಯ ಮನೀಶ್ ತಿರ್ಕಿ (33 ) ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಮುನೀಂ ಸಿಂಗ್ ( 20) ಬಂಧಿಸಲಾಗಿದೆ.
ಬಾಲಕಿಗೆ ಈ ಹಿಂದೆಯೂ ಆರೋಪಿಗಳು ಸಿಹಿ ತಿಂಡಿ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಕೃತ್ಯ ನಡೆದ ನಾಲ್ಕೈದು ದಿನಗಳ ಹಿಂದೆ ಆರೋಪಿಗಳು ಒಂದೆಡೆ ಸೇರಿ ಬಾಲಕಿಯ ಮೇಲೆ ದುಷ್ಕೃತ್ಯ ಎಸಗುವ ಬಗ್ಗೆ ಸಂಚು ರೂಪಿಸಿ ಕೃತ್ಯವೆಸಗಿದ್ದು ತನಿಖೆಯಿಂದ ತಿಳಿದುಬಂದಿದ್ದು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ವಿವರ:
ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಹೆಂಚಿನ ಕಾರ್ಖಾನೆಯಲ್ಲಿ ಸುಮಾರು 2 ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ದಂಪತಿಗಳಿಗೆ ನಾಲ್ವರು ಮಕ್ಕಳಿದ್ದು ಈ ಪೈಕಿ ಹಿರಿಯ ಮಗಳಾದ 8ರ ಹರೆಯದ ಬಾಲಕಿ ನ.21 ರ ಭಾನುವಾರ ಮಧ್ಯಾಹ್ನ ಊಟವಾದ ಬಳಿಕ ಆಟವಾಡಲೆಂದು ತೆರಳಿ ನಾಪತ್ತೆಯಾಗಿದ್ದಳು. ಸ್ಥಳೀಯರು, ಹೆತ್ತವರು ಹುಡುಕಾಡಿದಾಗ ಸಂಜೆ 6 ಗಂಟೆ ವೇಳೆಗೆ ಪ್ಯಾಕ್ಟರಿ ಒಳಗಡೆ ಇರುವ ತೋಡಿನಲ್ಲಿ ಶವವಾಗಿ ಪತ್ತೆಯಾಗಿತ್ತು. ಈ ಘಟನೆಯನ್ನು ಸೂಕ್ಷ್ಮ ಪ್ರಕರಣವೆಂದು ಪರಿಗಣಿಸಿದ ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗೆ ತನಿಖಾ ತಂಡ ನೇಮಿಸಿತ್ತು.
ಆರೋಪಿಗಳಲ್ಲಿ ಮೂವರು ಕಾರ್ಖಾನೆಯ ಕಾರ್ಮಿಕರಾಗಿದ್ದು, ಕೃತ್ಯದಲ್ಲಿ ಭಾಗಿಯಾದ ನಾಲ್ಕನೇ ಆರೋಪಿಯು ಮುನೀಂ ಸಿಂಗ್ ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದ. ನಾಪತ್ತೆಯಾದ ದಿನ ಬಾಲಕಿ ತನ್ನ ತಂಗಿ -ತಮ್ಮನೊಂದಿಗೆ ಕಾರ್ಖಾನೆಯ ಅವರಣದಲ್ಲಿದ್ದ ನೀರಿನ ಟ್ಯಾಂಕ್ ಬಳಿ ಆಟವಾಡುತ್ತಿದ್ದಾಗ, ಬಾಲಕಿಯನ್ನು ಆರೋಪಿಗಳು ಉಳಿದುಕೊಂಡಿದ್ದ ಕೋಣೆಗೆ ಎಳೆದೊಯ್ದಿದ್ದು ಒಬ್ಬೊಬ್ಬರಾಗಿಯೇ ಅತ್ಯಾಚಾವೆಸಗಿದ್ದಾರೆ, ಈ ವೇಳೆ ಬಾಲಕಿ ನೋವಿನಿಂದ ಕಿರುಚಾಡುತ್ತಿದ್ದಾ ಜಾಯ್ಬನ್ ಸಿಂಗ್ ಕತ್ತು ಹಿಸುಕಿ ಬಾಲಕಿಯ ಕೊಲೆಗೈದಿದ್ದಾನೆ. ದುಷ್ಕೃತ್ಯ ಎಸಗುವ ವೇಳೆ ಕೋಣೆಯತ್ತ ಯಾರು ಸುಳಿಯದಂತೆ ಆರೋಪಿಗಳು ಹೊರಗೆ ಕಾವಲು ಕಾಯುತ್ತಿರುತ್ತಾರೆ. ಬಳಿಕ ಕೊಲೆಗೈದ ಮೃತ ಬಾಲಕಿಯನ್ನು ಬಳಿಕ ಚರಂಡಿಗೆ ಎಸೆದಿದ್ದು, ಸಿಸಿ ಟಿವಿ ಇಲ್ಲದಿರುವುದರಿಂದ ಯಾರಿಗೂ ಅನುಮಾನ ಬಾರದಂತೆ ವರ್ತಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ತನಿಖಾ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ದಿನೇಶದ ಕುಮಾರ್, ಎಸಿಪಿ ರಂಜಿತ್ ಭಂಡಾರು, ರವೀಶ್ ನಾಯಕ್ ಮೊದಲಾದವರಿದ್ದರು.
Comments are closed.