ಕರಾವಳಿ

ಹಿಂದೂಗಳ ಭಾವನೆಗೆ ಧಕ್ಕೆ ಆರೋಪ ಎದುರಿಸುತ್ತಿರುವ “ತಾಂಡವ್ ತಂಡಕ್ಕೆ ಬಂಧನ ಭೀತಿ

Pinterest LinkedIn Tumblr

ಮುಂಬಾಯಿ: ತಾಂಡವ್​ ವೆಬ್​ ಸರಣಿಯ ವಿಚಾರವಾಗಿ ವಿವಾದಗಳು ಹೆಚ್ಚಾಗುತ್ತಲೇ ಇದ್ದು, ಇದೀಗ ಬಾಲಿವುಡ್​ ವೆಬ್​ ಸಿರೀಸ್​ ʼತಾಂಡವ್ʼ ತಂಡಕ್ಕೆ ಬಂಧನ ಭೀತಿ ಎದುರಾಗಿದೆ.

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪವನ್ನ ಎದುರಿಸುತ್ತಿರುವ ಬಾಲಿವುಡ್​ ವೆಬ್​ ಸಿರೀಸ್​ ʼತಾಂಡವ್ʼವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದು ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನ ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ.

ನಿರ್ದೇಶಕ ಅಲಿ ಅಬ್ಬಾಸ್​ ಹಾಗೂ ಇತರರ ಈ ಸಂಬಂಧ ಮುಂದಿನ ವಿಚಾರಣೆಯನ್ನ ನಾಲ್ಕು ವಾರಗಳ ಬಳಿಕ ನಡೆಸೋದಾಗಿ ಹೇಳಿದೆ. ಇದರಿಂದ ʼತಾಂಡವ್ʼ ತಂಡಕ್ಕೆ ಬಂಧನ ಭೀತಿ ಎದುರಾಗಿದೆ. ತಾಂಡವ್​ ವೆಬ್​ ಸರಣಿ ನಿರ್ದೇಶಕ ಅಲಿ ಅಬ್ಬಾಸ್​ ಜಾಫರ್​, ನಿರ್ಮಾಪಕ ಫರಾನ್​ ಅಖ್ತರ್​, ನಟ ಜೀಶಾನ್​​ ಅಯುಬ್​, ಸೈಫ್​ ಅಲಿ ಖಾನ್​ ಹಾಗೂ ಅಮೆಜಾನ್​ ಪ್ರೈಂ ವಿಡಿಯೋದ ಅಪರ್ಣಾ ಪುರೋಹಿತ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಸಿನಿಮಾದಲ್ಲಿ ಹಿಂದೂ ಭಾವನೆಗೆ ಧಕ್ಕೆ ತರಲಾಗಿದೆ ಹಾಗೂ ಹಿಂದೂ ದೇವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಾಕಷ್ಟು ವಿರೋಧದ ಬಳಿಕ ಸಿನಿಮಾ ತಂಡ ಕೂಡ ಕ್ಷಮೆಯಾಚಿಸಿತ್ತು.

ಆದರೆ ಈ ವೆಬ್​ ಸಿರೀಸ್​​ನ ವಿರುದ್ಧ ಅನೇಕ ರಾಜ್ಯಗಳಿಂದ ವಿರೋಧ ವ್ಯಕ್ತವಾಗ್ತಿದೆ. ತಾಂಡವ್​ ವೆಬ್​ ಸರಣಿಯ ವಿರುದ್ಧ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಪ್ರಕರಣ ದಾಖಲಾಗಿದೆ.

ಈಗಾಗಲೇ ದೇಶದ ವಿವಿಧ ಕೋರ್ಟ್​ಗಳಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾ. ಅಶೋಕ್​ ಭೂಷಣ್​, ಆರ್​. ಸುಭಾಷ್​ ರೆಡ್ಡಿ ಹಾಗೂ ಎಂಆರ್​ ಶಾ ನೇತೃತ್ವದ ನ್ಯಾಯಪೀಠ ಎಫ್​ಐಆರ್​​ ರದ್ದು ಕೋರಿ ಮೊದಲು ಹೈರ್ಕೋಟ್​ ಅರ್ಜಿ ಸಲ್ಲಿಸಿ ಎಂದು ಚಿತ್ರತಂಡಕ್ಕೆ ಸೂಚನೆ ನೀಡಿದೆ.

Comments are closed.