ಮನೋರಂಜನೆ

ಸುಶಾಂತ್​ ಹತ್ಯೆ ಮಾಡಿದವರು ಯಾರು ಗೊತ್ತಾ?: ಚೇತನ್​ ಭಗತ್​

Pinterest LinkedIn Tumblr


ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಎರಡೂವರೆ ತಿಂಗಳಾಗಿವೆ. ಜೂನ್​ ತಿಂಗಳಲ್ಲಿ ಅವರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಷ್ಟು ದಿನಗಳಲ್ಲಿ ಅವರ ಸಾವಿಗೆ ಕಾರಣವೇನು ಮತ್ತು ಕಾರಣ ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಲೇ ಇದೆ. ಈಗ ಸಿಬಿಐ ಸಹ ಈ ವಿಷಯನ್ನು ತನಿಖೆ ನಡೆಸುತ್ತಿದೆ.

ಈಗ ಖ್ಯಾತ ಲೇಖಕ ಚೇತನ್​ ಭಗತ್​ ಅವರು ಸುಶಾಂತ್​ ಸಾವಿಗೆ ಕಾರಣವೇನು ಎಂದು ಹೇಳಿದ್ದಾರೆ. ಚೇತನ್​ ಭಗತ್​ ಅವರ ‘ಥ್ರೀ ಮಿಸ್ಟೇಕ್ಸ್​ ಆಫ್​ ಮೈ ಲೈಫ್​’ ಕಾದಂಬರಿಯನ್ನಾಧರಿಸಿ ‘ಕಾಯ್​ ಪೋ ಚೇ’ ಚಿತ್ರವನ್ನು ಮಾಡಲಾಗಿತ್ತು. ಅಲ್ಲಿಂದ ಸುಶಾಂತ್​ ಮತ್ತು ಚೇತನ್​ ಭಗತ್​ ನಡುವೆ ಒಳ್ಳೆಯ ಗೆಳತನವಿತ್ತು.

ಅಷ್ಟೇ ಅಲ್ಲ, ಸುಶಾಂತ್​ ಅವರ ಕೊನೆಯ ಚಿತ್ರ ‘ದಿಲ್​ ಬೇಚಾರಾ’ ಓಟಿಟಿಯೊಂದರಲ್ಲಿ ಬಿಡುಗಡೆಯಾದಾಗ, ಆ ಚಿತ್ರದ ಬಗ್ಗೆ ಕೆಟ್ಟದಾಗಿ ಬರೆದು ಸುಶಾಂತ್​ಗೆ ಮತ್ತೊಮ್ಮೆ ನೋವು ಮಾಡಬೇಡಿ ಎಂದು ಮನವಿ ಮಾಡಿದ್ದರು. ಜತೆಗೆ ಬಾಲಿವುಡ್​ ಮಾಫಿಯಾ, ಹೊರಗಿನವರನ್ನು ಹೇಗೆ ತುಳಿಯುತ್ತದೆ ಎಂದು ಹೇಳುವುದರ ಜತೆಗೆ, ತಮಗೆ ಏನೆಲ್ಲಾ ಆಯಿತು ಎಂಬುದನ್ನು ಅವರು ವಿವರಿಸಿದ್ದರು.

ಈಗ ಚೇತನ್​ ಭಗತ್​, ಮತ್ತೊಮ್ಮೆ ಸುಶಾಂತ್​ ಸಾವಿನ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಅವರು, ಸುಶಾಂತ್​ ಸಾವಿಗೆ ಕಾರಣವೇನು ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ, ಕಾರಣವೇನು ಗೊತ್ತಾ? ಮಾಧ್ಯಮ ವರದಿಗಳು.

ಸುಶಾಂತ್​ ಬಗ್ಗೆ ಕೆಲವು ಕಡೆ ನೆಗೆಟಿವ್​ ಆದಂತಹ ವರದಿಗಳು ಪ್ರಕಟಗೊಂಡಿದ್ದವು ಮತ್ತು ಅವನ್ನೆಲ್ಲಾ ಜೋಡಿ ಸುಶಾಂತ್​ ಬಹಳ ನೊಂದಿದ್ದರು ಎಂಬುದು ಗೊತ್ತಿರುವ ವಿಷಯವೇ. ಈಗ ಚೇತನ್​ ಸಹ ಅದನ್ನೇ ಹೇಳಿದ್ದಾರೆ.

‘ಕೆಲವರು ಅದ್ಯಾಕೋ ಸುಶಾಂತ್​ ಅವರನ್ನು ಟಾರ್ಗೆಟ್​ ಮಾಡಿದ್ದರು. ಪದೇಪದೇ ಅವರ ಬಗ್ಗೆ ನೆಗೆಟಿವ್​ ಆದಂತಹ ವರದಿಗಳನ್ನು ಬರೆಯುತ್ತಿದ್ದರು. ಇದನ್ನು ನೋಡಿ ಅವರಿಗೆ ಬಹಳ ನೋವಾಗಿತ್ತು. ಇನ್ನು ‘ಚಿಚ್ಚೋರೇ’ ಚಿತ್ರದ ಯಶಸ್ಸಿನಲ್ಲಿ ತಮಗೆ ಕ್ರೆಡಿಟ್​ ಸಿಗಲಿಲ್ಲ ಎಂಬ ಬೇಸರ ಅವರಲ್ಲಿ ಬಹಳ ಇತ್ತು. ಈ ಬಗ್ಗೆ ನಿರ್ದೇಶಕ ಅಭಿಷೇಕ್​ ಕಪೂರ್​ ಅವರಲ್ಲಿ ದುಃಖ ತೋಡಿಕೊಂಡಿದ್ದರು’ ಎಂದು ಚೇತನ್​ ಭಗತ್​ ಹೇಳಿಕೊಂಡಿದ್ದಾರೆ.

Comments are closed.