
ಬೆಂಗಳೂರು(ಮೇ.02): ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ಮೂರನೇ ಬಾರಿಗೆ ದೇಶದಲ್ಲಿ ಲಾಕ್ಡೌನ್ ವಿಸ್ತರಿಸಿದೆ. ಹಾಗಾಗಿ ಕೇಂದ್ರದ ಆದೇಶದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ರಾಜ್ಯದಲ್ಲಿ ಲಾಕ್ಡೌನ್ ಸಡಿಲಗೊಳಿಸಿ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಸರ್ಕಾರ ಮೂರನೇ ಸಲ ಮೇ 17ರವರೆಗೂ ಲಾಕ್ಡೌನ್ ವಿಸ್ತರಿಸಿದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸಂಪುಟದ ಹಿರಿಯ ಸದಸ್ಯರು, ಉನ್ನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು. ಇಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ನೀಡಿದ ಮಾಹಿತಿ ಅನ್ವಯ ಕೇಂದ್ರದ ಆದೇಶದ ಮೇರೆಗೆ ಹೊಸ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿದೆ. ನಾಳೆಯಿಂದ ಈ ಹೊಸ ಮಾರ್ಗ ಸೂಚಿಯೇ ಅನ್ವಯವಾಗಲಿದೆ.
ಇನ್ನು, ಕೇಂದ್ರದ ಹೊಸ ಮಾರ್ಗ ಸೂಚಿಯೇ ಯಥಾವತ್ತಾಗಿ ಪಾಲನೆ ಮಾಡಲು ಸಿಎಂ ಸಮ್ಮತಿ ನೀಡಿದ್ದಾರೆ. ಇದರ ಪ್ರಕಾರ ರೈಲು ಪ್ರಯಾಣ ಮತ್ತು ಅಂತರ್ರಾಜ್ಯ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ತಿಳಿದು ಬಂದಿದೆ.
ಮೆಟ್ರೋ ರೈಲು ಸಂಚಾರ, ಶಾಲಾ-ಕಾಲೇಜುಗಳು, ಚಲನಚಿತ್ರ ಮಂದಿರಗಳು, ಮಾಲ್ಗಳು, ಜಿಮ್, ಸ್ವಿಮ್ಮಿಂಗ್ ಪೂಲ್ಸ್, ಎಂಟರ್ಟೈನ್ಮೆಂಟ್ ಪಾರ್ಕ್ಸ್ ಯಾವುದನ್ನು ಓಪನ್ ಮಾಡಲು ಅನುಮತಿ ನೀಡಿಲ್ಲ.
ಗ್ರೀನ್ ಜೋನ್ನಲ್ಲಿ ಏನಿರಲಿದೆ?
ಅಂತರ್ರಾಜ್ಯ ಸರಕು ಸಾಗಾಣೆಗೆ ಅವಕಾಶ
50% ಸೀಟುಗಳ ಸಾಮರ್ಥ್ಯ ಕಡ್ಡಾಯ ಪಾಲನೆ ಮಾಡಿ ಬಸ್ ಪ್ರಯಾಣಕ್ಕೆ ಅವಕಾಶ
ಮೇ 17ರವರೆಗೆ ವಿಮಾನ ಸಂಚಾರ ಇಲ್ಲ
ಗ್ರೀನ್, ಆರೆಂಜ್ ಜೋನ್ಗಳಲ್ಲಿ ಲಾಕ್ಡೌನ್ ಸಡಿಲಿಕೆ
ಎಲ್ಲ ಜೋನ್ಗಳಲ್ಲಿ ಅಸ್ಪತ್ರೆಗಳಿಗೆ ಓಪಿಡಿ ತೆರೆಯಲು ಅವಕಾಶ
Comments are closed.