
ಒಂದಲ್ಲ, ಎರಡಲ್ಲ ಸತತ ಐದು ವರ್ಷವೇ ಆಯ್ತು. ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ನಿರ್ದೇಶನಕ್ಕೆ ಧುಮುಕದೇ. ಆದ್ರೀಗ ರಕ್ಷಿತ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರಂತೆ. ಅಷ್ಟಕ್ಕೂ ರಕ್ಷಿತ್ ನಿರ್ದೇಶಿಸ್ತಿರೋ ಹೊಸ ಸಿನಿಮಾ ಯಾವುದು..? ಏನ್ ಕಥೆ..? ಎಲ್ಲಾ ಹೇಳ್ತೀವಿ ಜಸ್ಟ್ ವಾಚ್..
ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ಸಿಂಪಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಸ್ಯಾಂಡಲ್ ವುಡ್ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿತ್ತು.ಚಿತ್ರದಲ್ಲಿ ಡೈಲಾಗ್ ಮತ್ತು ಡಿಫರೆಂಟ್ ನಟನೆಯಿಂದ ರಕ್ಷಿತ್ ಶೆಟ್ಟಿ ‘ಸಿಂಪಲ್ ಸ್ಟಾರ್’ ಅಂತ್ಲೇ ಫೇಮಸ್ ಆದ್ರು.
ಯಾವಾಗ ರಕ್ಷಿತ್ ನಟನಾಗಿ ಫೇಮಸ್ ಆದ್ರೋ ಆಗ ಸ್ಯಾಂಡಲ್ವುಡ್ ಡೈರೆಕ್ಟರ್ ರಕ್ಷಿತ್ನನ್ನು ಮಿಸ್ ಮಾಡ್ಕೊಂಡಿತ್ತು. ಯಾಕಂದ್ರೆ ರಕ್ಷಿತ್ ಆ್ಯಕ್ಷನ್ ಕಟ್ ಹೇಳಿದ್ದು ಒಂದೇ ಚಿತ್ರಕ್ಕೆ. ಅದು ಉಳಿದವರು ಕಂಡಂತೆ. ಆದ್ರೆ ಆ ಸಿನಿಮಾದ ಕನ್ನಡದ ಪಾಳಿಗೆ ಹೊಸ ಸಾಧ್ಯತೆಗಳನ್ನು ತೆರಿದಿಟ್ಟ ಸಿನಿಮಾ. ಹೀಗಾಗಿ ರಕ್ಷಿತ್ ಡೈರೆಕ್ಷನ್ಗೆ ಕಾಯ್ತಾ ಇರೋ ದೊಡ್ಡ ಬಳವೇ ಇದೆ.
ಸದ್ಯ ರಕ್ಷಿತ್ ಶೆಟ್ಟಿ ಸದ್ಯ ಅವನೇ ಶ್ರೀಮನ್ನಾರಾಯಣ ಮತ್ತು ಚಾರ್ಲಿ 777 ಸಿನಿಮಾಗಳಲ್ಲಿ ಬ್ಯಸಿ ಇದ್ದಾರೆ. ಅವನೇ ಶ್ರೀಮನ್ನಾರಾಯಣ ಟೀಸರ್ ಮೂಲಕೇ ಭಾರೀ ಸೌಂಡ್ ಮಾಡಿದೆ. ಚಾರ್ಲಿ 777 ಕೂಡ ಪೋಸ್ಟರ್ ಮೂಲಕ ಕುತೂಹಲ ಹುಟ್ಟಿಸಿದೆ.
ಅಂದಹಾಗೆ ಈ ಎರಡು ಸಿನಿಮಾಗಳ ಗ್ಯಾಪ್ನಲ್ಲಿ ಕರ್ಣ ನಿರ್ದೇಶನಕ್ಕೆ ರೆಡಿ ಮಾಡ್ತಾ ಇದ್ದಾರೆ. ಅದು ಭಾರೀ ಬಜೆಟ್ ಸಿನಿಮಾವಂತೆ. ಹೆಚ್ಚುಕಡಿಮೆ 100 ಕೋಟಿಯಲ್ಲಿ ಈ ಸಿನಿಮಾ ತಯಾರಾಗಲಿದೆ. ಅಂದಹಾಗೆ ಈ ಹೈ ಬಜೆಟ್ ಸಿನಿಮಾವೇ ಪುಣ್ಯಕೋಟಿ.
ಸತತ ಎರಡು, ಮೂರು ವರ್ಷಗಳಿಂದ ಈ ಸಿನಿಮಾಕ್ಕೆ ರಕ್ಷಿತ್ ಪ್ರಿಪರೇಷನ್ ಮಾಡ್ಕೊಳ್ತಿದ್ದಾರಂತೆ. ಅಲ್ಲದೇ ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಆಗ್ತಿದ್ದಂತೆ ಪುಣ್ಯಕೋಟಿ ಟೇಕಾಫ್ ಆಗಲಿದೆ. ಅಲ್ಲಿಗೆ 5 ವರ್ಷಗಳ ಬಳಿಕ ಕಿರಿಕ್ ಹುಡ್ಗ ಡೈರೆಕ್ಟರ್ ಸೀಟ್ನಲ್ಲಿ ಕೂರಲಿದ್ದಾರೆ.
ಈ ಸಿನಿಮಾಕ್ಕೆ ಬೃಹತ್ ಸೆಟ್ ಹಾಕಲಾಗ್ತಿದೆ. ಈಗಾಗ್ಲೇ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಐದು ಭಾಷೆಯಲ್ಲಿ ರಿಲೀಸ್ ಆಗ್ತಿದೆ. ಅದರಂತೆ ಪುಣ್ಯಕೋಟಿ ಸಿನಿಮಾ ಕೂಡ ಬಹುಭಾಷಾ ಸಿನಿಮಾ.
ಒಟ್ನಲ್ಲಿ ರಕ್ಷಿತ್ ಶೆಟ್ಟಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡೋಕೆ ರಡಿಯಾಗಿರೋದು ಫ್ಯಾನ್ಸ್ಗೆ ಖುಷಿಯ ವಿಚಾರ.
Comments are closed.