ಕರ್ನಾಟಕ

ಆ ಕುಳ್ಳ ಬಿಜೆಪಿಗೆ ಮತಹಾಕಿ ಇಲ್ಲಿ ಕೆಲಸಕ್ಕಿದ್ದಾನೆ: ರೇವಣ್ಣ

Pinterest LinkedIn Tumblr


ಹಾಸನ: ಆ ಮಾರಗೌಡನಹಳ್ಳಿಯ ಕುಳ್ಳ ಇದ್ದಾನಲ್ಲ ಅವನು ಬಿಜೆಪಿಗೆ ವೋಟು ಹಾಕ್ತಾನೆ. ಆದರೆ, ಇಲ್ಲಿ ಕೆಲಸಕ್ಕಿದ್ದಾನೆ ಎಂದು ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಅವರು ಹೇಳಿದರು.

ಹಾಸನದಲ್ಲಿಂದು ಚೆಸ್ಕಾಂ ಮುಖ್ಯ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಶಂಕುಸ್ಥಾಪನೆ ವೇಳೆ ಮಾತನಾಡಿದ ಅವರು, ನನ್ನ ಹತ್ರ ಕೆಲಸಕ್ಕೆ ಬರ್ತಾನೆ. ಆದರೆ, ಅವನು ವೋಟು ಹಾಕೋದು ಬಿಜೆಪಿಗೆ ಎಂದು ನಗುತ್ತಲೇ ತಮ್ಮ ಕ್ಷೇತ್ರದ ಮತದಾರನ ಬಗ್ಗೆ ಸಚಿವ ಹೆಚ್​.ಡಿ ರೇವಣ್ಣ ಹಾಸ್ಯ ಚಟಾಕಿ ಹಾರಿಸಿದರು.

ಇನ್ನು ಆ ಮಾತನ್ನು ಕೇಳುತ್ತಿದ್ದಂತೆ ಪಕ್ಕದಲ್ಲಿದ್ದ ಲೈನ್​ಮೆನ್​ ನಾನು ಸತ್ತರೂ ಬಿಜೆಪಿಗೆ ಮತಹಾಕಲ್ಲಾ ಎಂದು ರೇವಣ್ಣ ಹೇಳಿಕೆಗೆ ಧ್ವನಿ ಸೇರಿದರು. ಮಾತು ಮುಂದುವರೆಸಿದ ರೇವಣ್ಣ, ನಾನು ಕಳೆದ 2006ರ ನಮ್ ಸರ್ಕಾರದಲ್ಲಿ ಲೈನ್​ಮೆನ್​ಗಳ ನೇಮಕಾತಿ ಮಾಡಿದ್ದೆ. ಯಡಿಯೂರಪ್ಪ ಮತ್ತು ಶೋಭಕ್ಕ ಇಬ್ಬರೂ ಸೇರಿ ಲೈನ್​​ಮೆನ್ ನೇಮಕಾತಿ ರದ್ದು ಮಾಡಿದರು ಎಂದು ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ನುಡಿದರು.

Comments are closed.