ಬೆಂಗಳೂರು: ವಿಶ್ವಕಪ್ನಲ್ಲಿಂದು ನಡೆಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಪಂದ್ಯ ಸಾಕಷ್ಟು ರೋಚಕತೆ ಪಡೆಯುತ್ತಿದೆ. ಈಗಾಗಲೇ ಟೀಂ ಇಂಡಿಯಾ ತನ್ನ ಇನ್ನಿಂಗ್ಸ್ ಮುಗಿಸಿದ್ದು, ರೋಹಿತ್ ಶರ್ಮಾರ ಅಮೋಘ ಶತಕ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಎದುರಾಳಿಗೆ ಗೆಲ್ಲಲು 337 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಪಂದ್ಯದ ಮಧ್ಯೆ ರೋಹಿತ್ ಶರ್ಮಾ 140 ರನ್ಗೆ ಔಟ್ ಆದ ಬಳಿಕ ತಂಡದ ರನ್ಗತಿಯನ್ನು ಏರಿಸುವ ಜವಾಬ್ದಾರಿ ಹೊತ್ತ ಕೊಹ್ಲಿ ಔಟ್ ಆಗದಿದ್ದರೂ, ಅಂಪೈರ್ ಔಟ್ ನೀಡದಿದ್ದರೂ ಔಟ್ ಎಂದು ಮೈದಾನ ತೊರೆದ ಘಟನೆ ನಡೆದಿದೆ.
ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವ ವೇಳೆ 46.4 ಓವರ್ ಆಗುವಾಗ ಮಳೆರಾಯ ಪಂದ್ಯಕ್ಕೆ ಅಡ್ಡಿ ಪಡಿಸಿದ. ಈ ಸಂದರ್ಭ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿತ್ತು. ಕೊಹ್ಲಿ 71 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಮಳೆ ನಿಂತ ಬಳಿಕ ಭಾರತ ಮತ್ತೆ ಬ್ಯಾಟಿಂಗ್ ಆರಂಭಿಸಿತಾದರು ಮುಂದಿನ ಓವರ್ನಲ್ಲೇ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ಇದು ನಾಟೌಟ್ ಆಗಿತ್ತು.
48ನೇ ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ಅಮೀರ್ ತನ್ನ 4ನೇ ಎಸೆತ ಬೌನ್ಸರ್ ಹಾಕಿದ್ದು, ಕೊಹ್ಲಿ ಹೊಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟ್ಗೆ ತಾಗದೇ ಸಂಪೂರ್ಣ ವಿಫಲವಾಗಿ ಕೀಪರ್ ಸರ್ಫರಾಜ್ ಕೈ ಸೇರಿತು.
ಈ ಸಂದರ್ಭ ಅಂಪೈರ್ ನಿರ್ಣಯಕ್ಕೂ ಕಾಯದ ಕೊಹ್ಲಿ ಕ್ರೀಡಾಸ್ಪೂರ್ತಿ ಮೆರೆಯುತ್ತ ಔಟ್ ಎಂದು ಮೈದಾನ ತೊರೆದರು. ಆದರೆ ಅಸಲಿಗೆ ಇದು ಔಟ್ ಆಗಿರಲಿಲ್ಲ. ಚೆಂಡು ಬ್ಯಾಟ್ಗೆ ತಾಗಿಯೇ ಇರಲಿಲ್ಲ. ಇದು ಅಂಪೈರ್ಗೂ ತಿಳಿದಿತ್ತು, ಹೀಗಾಗಿ ಅಂಪೈರ್ ಕೂಡ ಔಟ್ ನೀಡಲಿಲ್ಲ. ಆದರೆ, ಕೊಹ್ಲಿ ಔಟ್ ಎಂದು ತಿಳಿದು ಕ್ರೀಸ್ನಿಂದ ಹೊರ ನಡೆದರು. ಡಿಆರ್ಎಸ್ ಮತ್ತವೂ ಮುಖ ಮಾಡಿಲ್ಲ. ಭಾರತದ ನಾಯಕನ ಈ ವರ್ತನೆಗೆ ಭಾರೀ ಬೆಲೆ ತೆರಬೇಕಾಯಿತು. ಅಲ್ಲದೆ ರನ್ರೇಟ್ನಲ್ಲೂ ಕುಸಿತ ಕಾಣಬೇಕಾಯಿತು.
Comments are closed.