ಮನೋರಂಜನೆ

ಈ ಬಾರಿ ನವೀನ್ ಸಜ್ಜು ಬಿಗ್​ಬಾಸ್​ ಗೆದ್ದರೆ ಹಣದಲ್ಲಿ ಏನು ಮಾಡುತ್ತಾರಂತೆ ಗೊತ್ತೇ…?

Pinterest LinkedIn Tumblr

ಎದೆಯೊಳಗಿನ ತಮ ತಮ ತಮಟೆ… ಎಂದು ಕನ್ನಡಿಗರ ಮನ ಗೆದ್ದಿದ್ದ ಗಾಯಕ ನವೀನ್​ ಸಜ್ಜು ಈಗ ಮತ್ತೊಮ್ಮೆ ಕರುನಾಡ ಜನರ ಹೃದಯ ಗೆದ್ದಿದ್ದಾರೆ. ಜನಪ್ರಿಯ ಕಿರುತೆರೆ ರಿಯಾಲಿಟಿ ಶೋ ಬಿಗ್​ ಬಾಸ್​-6 ನಲ್ಲಿ ತಮ್ಮ ನಡೆ ನುಡಿಗಳ ಮೂಲಕವೇ ಮನೆಮಾತಾಗಿದ್ದವರು ನವೀನ್. ಇದೀಗ ಬಿಗ್​ಬಾಸ್ ಕೊನೆಯ ಹಂತಕ್ಕೆ ಬಂದು ತಲುಪಿದೆ.​ ಮನೆಯಲ್ಲಿ ಐವರು ಸ್ಪರ್ಧಿಗಳು ಮಾತ್ರ ಉಳಿದಿದ್ದು, ಇನ್ನೇನು ಮೂರು ದಿನಗಳಲ್ಲಿ ಬಿಗ್​ಬಾಸ್​-6 ಗ್ರ್ಯಾಂಡ್ ಫಿನಾಲೆ ಕೂಡ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಅದರಂತೆ ಮಂಗಳವಾರ ನಡೆದ ಎಪಿಸೋಡ್​ನಲ್ಲಿ ಈ ಬಾರಿಯ ಬಿಗ್​ಬಾಸ್-6​ ವಿನ್ನರ್​ ನೀವಾದರೆ ಏನು ಮಾಡುತ್ತೀರಿ ಎಂದು ಸ್ಫರ್ಧಿಗಳನ್ನು ಪ್ರಶ್ನಿಸಲಾಗಿತ್ತು.

ಈ ಪ್ರಶ್ನೆಗೆ ಕವಿತಾ, ರಶ್ಮಿ, ಶಶಿ, ಆಂಡಿ ಒಂದೊಂದು ರೀತಿಯ ಉತ್ತರ ನೀಡಿದ್ದರೆ, ಯುವ ಗಾಯಕ ನವೀನ್​ ನೀಡಿದ ಉತ್ತರ ಪ್ರೇಕ್ಷಕರ ಮನತಟ್ಟಿದೆ. ಹೌದು, ತಾನು ಬಿಗ್​ಬಾಸ್​ ಗೆದ್ದರೆ ಹಳ್ಳಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎನ್ನುವ ಮೂಲಕ ನವೀನ್​ ಮಣ್ಣಿನ ಮಗ ಎಂದು ನಿರೂಪಿಸಿದರು.

ನವೀನ್​ ನೀಡಿದ ಈ ಉತ್ತರಕ್ಕೆ ಅವರ ಅಭಿಮಾನಿಗಳೂ ಕೂಡ ಫಿದಾ ಆಗಿದ್ದಾರೆ. ಬಿಗ್​ಬಾಸ್​ ಬರುವುದಕ್ಕಿಂತಲೂ ಮುಂಚಿತವಾಗಿ ಅದ್ಭುತ ಗಾಯನದ ಮೂಲಕ ಸ್ಟಾರ್​ ಎನಿಸಿಕೊಂಡಿದ್ದರು. ಈಗ ಸಿಕ್ಕಿರುವ ವೇದಿಕೆಯ ಮೂಲಕ ಒಂದಷ್ಟು ಸಾಮಾಜಿಕ ಕೆಲಸಕ್ಕೂ ಕೈ ಹಾಕುವ ಸೂಚನೆ ನೀಡಿದ್ದಾರೆ. ಬಿಗ್​ಬಾಸ್​ ಸ್ಪರ್ಧಿಯ ಸಾಮಾಜಿಕ ಕಳಕಳಿ ಕೇಳಿ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ನವೀನ್​ರನ್ನು ಕೊಂಡಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಯುವ ಗಾಯಕನ ಪರ ಅಲೆಯಿದ್ದು, ಈ ಬಾರಿಯ ಬಿಗ್​ಬಾಸ್​ ಚಾಂಪಿಯನ್​ ಆಗಿ ನವೀನ್​ ಸಜ್ಜು ಹೊರ ಹೊಮ್ಮಲಿದ್ದಾರೆ ಎನ್ನಲಾಗುತ್ತಿದೆ. ಅದರಂತೆ ಅಭಿಮಾನಿಗಳು ಫೇಸ್​ಬುಕ್​, ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ನಲ್ಲಿ ನವೀನ್​ ಸಜ್ಜುಗೆ ವೋಟ್​ ನೀಡಿ, ಬಡ ಜನರಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡುತ್ತಿದ್ದಾರೆ.

Comments are closed.