ಮನೋರಂಜನೆ

ನಾನು ಆರೋಗ್ಯವಾಗಿದ್ದೇನೆ. ಅಭಿಮಾನಿಗಳು ಆತಂಕ ಪಡುವ ಅಗತ್ಯ ಇಲ್ಲ: ಶಿವಣ್ಣ

Pinterest LinkedIn Tumblr

ಬೆಂಗಳೂರು: ನಾನು ಆರೋಗ್ಯವಾಗಿದ್ದೇನೆ. ಅಭಿಮಾನಿಗಳು ಆತಂಕ ಪಡುವ ಅಗತ್ಯ ಇಲ್ಲ ಎಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಮಲ್ಯ ಆಸ್ಪತ್ರೆಗೆ ದಾಖಲಾಗಿರುವ ನಟ ಶಿವರಾಜ್​ಕುಮಾರ್ ಅವರು ಸೋಮವಾರ​ ಹೇಳಿದ್ದಾರೆ.

ಇಂದು ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ನಾನು ಹುಷಾರಾಗಿದ್ದೇನೆ. ಚಳಿ, ಜ್ವರ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದೆ. ಎರಡು ದಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಅಷ್ಟೇ ಎಂದರು.

ಜ್ವರ ಯಾರಿಗೆ ಬರಲ್ಲ ಹೇಳಿ. ಎಲ್ಲ ಮನುಷ್ಯನಿಗೂ ಜ್ವರ ಬರುತ್ತೆ. ಅದೇ ರೀತಿ ನನಗೂ ಬಂದಿದೆ. ಅಭಿಮಾನಿಗಳ ಪ್ರೀತಿ, ಆಶೀರ್ವಾದದಿಂದ ಈಗ ಹುಷಾರಾಗಿದ್ದೇನೆ. ಯಾವುದೇ ಸಮಸ್ಯೆಯಿಲ್ಲ ಎಂದರು.

ಈ ವೇಳೆ ಮಾತನಾಡಿದ ಮಲ್ಯ ಆಸ್ಪತ್ರೆ ವೈದ್ಯ ವಿ.ಕೆ.ಶ್ರೀನಿವಾಸ್ ಅವರು, ಅವರಿಗೆ ಸಣ್ಣ ಜ್ವರ ಬಂದಿತ್ತು. ಎಲ್ಲ ರೀತಿಯ ಟೆಸ್ಟ್ ಮಾಡಿದ್ದೇವೆ. ನಾರ್ಮಲ್ ಆಗಿದೆ. ಅವರನ್ನು ನಾಳೆ ಡಿಸ್ಚಾರ್ಜ್ ಮಾಡುತ್ತೇವೆ ಎಂದರು.

Comments are closed.