ಮುಂಬೈ

ಹೃದಯಾಘಾತದಿಂದ ಬಿಜೆಪಿಯ ಕೃಷಿ ಸಚಿವ ಪಾಂಡುರಂಗ ಫುಂಡ್ಕರ್ ನಿಧನ

Pinterest LinkedIn Tumblr


ಮುಂಬೈ: ಮಹಾರಾಷ್ಟ್ರದ ಕೃಷಿ ಸಚಿವ, ಬಿಜೆಪಿ ಹಿರಿಯ ನಾಯಕ ಪಾಂಡುರಂಗ ಫುಂಡ್ಕರ್‌‌ ಹೃದಯಾಘಾತದಿಂದ ಗುರುವಾರ ಬೆಳಿಗ್ಗೆ ನಿಧನರಾದರು.

ಇತ್ತೀಚೆಗೆ ಪಾಂಡುರಂಗ (67)ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖ ಲಾಗಿದ್ದರು. ಬೆಳಗಿನ ಜಾವ ಎದೆ ನೋವು ಕಾಣಿಸಿಕೊಂಡು ಅವರು ಕೊನೆಯುಸಿರೆಳೆ ದಿದ್ದಾರೆ. ಮೃತರು ಮೂರು ಬಾರಿ ಲೋಕಸಭಾ ಸದಸ್ಯರಾಗಿ, ಮಹಾರಾಷ್ಟ್ರ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಖಾಮ್‌ಗಾಂವ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಮುಖ್ಯಮಂತ್ರಿ ಫಡ್ನವೀಸ್‌ ಸರಕಾರದಲ್ಲಿ ಕೃಷಿ ಖಾತೆಯನ್ನು ನಿರ್ವಹಿಸು ತ್ತಿದ್ದರು.

Comments are closed.