ಕರ್ನಾಟಕ

​ಕಾರ್ಪೋರೇಟರ್‌ಗೆ ಇರಿದ ಮಗ: ನಿರಾಕರಿಸಿದ ತಂದೆ

Pinterest LinkedIn Tumblr


ಬೆಂಗಳೂರು: ತನ್ನ ಪ್ರೀತಿಯನ್ನು ಒಪ್ಪದ ಅಪ್ಪ, ಕಾರ್ಪೋರೇಟರ್‌ಗೆ ಮಗನೇ ಚಾಕು ಇರಿದಿದ್ದಾನೆ ಎಂಬ ಸುದ್ದಿಯನ್ನು ಕತ್ರಿಗುಪ್ಪೆ ಕಾರ್ಪೋರೇಟರ್‌ ಸಂಗಾತಿ ವೆಂಕಟೇಶ ನಿರಾಕರಿಸಿದ್ದಾರೆ.

ವೆಂಕಟೇಶ ಮಗ ಸಾಗರ್‌ನಿಂದ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಸದ್ಯ ಪ್ರಶಾಂತ್‌ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ ತನ್ನ ಪ್ರೀತಿಯನ್ನು ನಿರಾಕರಿಸಿದ ಸಿಟ್ಟಿಗೆ ಮಗ ಈ ಕೃತ್ಯ ಎಸಗಿದ್ದಾನೆ ಎಂದು ಸುದ್ದಿಯಾಗಿತ್ತು.

ಆ ರೀತಿಯ ಸುದ್ದಿ ಹರಡಿದ್ದು ನಿಜ. ಆದರೆ ಆ ರೀತಿ ಏನೂ‌ ಆಗಿಲ್ಲ. ಮನೆಯಲ್ಲೇ ಇದ್ದೇವೆ, ಬೇಕಿದ್ದರೆ ಮನೆಗೆ ಬನ್ನಿ ಎಂದು ವೆಂಕಟೇಶ್‌ ಅವರ ತಿ ಆ ರೀತಿಯ ಯಾವುದೇ ಘಟನೆ ನಡೆದಿರುವ ಬಗ್ಗೆ ದೂರು ಬಂದಿಲ್ಲ. ನಾವು ವಿಚಾರಿಸಿದರೂ‌ ಆ ರೀತಿಯ ಯಾವುದೇ‌ ಘಟನೆ ನಡೆದಿಲ್ಲ ಎಂದು ಮನೆಯವರು ಉತ್ತರಿಸಿದ್ದಾರೆ ಎಂದು ಡಿಸಿಪಿ ಶರಣಪ್ಪ ಹೇಳಿದ್ದಾರೆ.

ಏನು ಆಗಿಲ್ಲ, ನನಗೆ ಆಗದವರ ಸುಳ್ಳು ವದಂತಿ ಇದು. ನನಗೂ ಶಾಕ್. ನಾನು ಅಪ್ಪ ಮನೆಯಲ್ಲೇ ಇದ್ದಾಗ ಈ ರೀತಿಯ ಕಾಲ್‌ಗಳು ಇಬ್ಬರಿಗೂ ಬರಲು ಶುರುವಾಯಿತು ಎಂದು ಮಗ ಸಾಗರ್ ಹೇಳಿದ್ದಾರೆ. ವೈರಲ್ ಜ್ವರ ಬಂದಿತ್ತು‌ ಅಂತ ಆಸ್ಪತ್ರೆಗೆ ದಾಖಲಾಗಿದ್ದೆ. ಮನೆಗೆ ಬರುವಷ್ಟರಲ್ಲಿ ಈ ಸುದ್ದಿ ಹರಡಿದೆ ಎಂದು ವೆಂಕಟೇಶ್‌ ಹೇಳಿದ್ದಾರೆ.

Comments are closed.