
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಿಂದ ಈ ವಾರ ಕೊಡಗಿನ ಬೆಡಗಿ ಕೃಷಿ ತಾಪಂಡ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಆದರೆ ವೀಕ್ಷಕರಿಗೆ ಕೃಷಿ ಹೊರ ಹೋಗಿದ್ದು ಇಷ್ಟವಾಗಿಲ್ಲ. ಕಳಪೆ ವೋಟ್ ಬಂದ ಹಿನ್ನಲೆಯಲ್ಲಿ ಕೃಷಿ ಹೊರಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಕೃಷಿ ಹೊರಬರುವ ಬದಲು ಜಗನ್ ಅಥವಾ ಆಶಿತಾರನ್ನು ಹೊರ ಕಳುಹಿಸಬೇಕಿತ್ತು ಎಂದು ಕೆಲವರು ಕಿಡಿ ಕಾರಿದ್ದಾರೆ.
ಕೃಷಿ ಚೆನ್ನಾಗಿ ಆಡುತ್ತಿದ್ದರು ಯಾಕೆ ಅವರನ್ನು ಹೊರ ಹಾಕಿದಿರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ರೀತಿ ಪ್ರತೀ ಸ್ಪರ್ಧಿಗಳೂ ಹೊರ ಹೋಗುವಾಗ ಅವರ ಅಭಿಮಾನಿಗಳು ಈ ರೀತಿ ಹೇಳುವುದು ಸಹಜ ಬಿಡಿ.
Comments are closed.