
ಬೆಂಗಳೂರು: ದೇಶದ ಪಾರಂಪರಿಕ ಜ್ಞಾನದ ಬಗ್ಗೆ ಕೀಳರಿಮೆಯನ್ನು ಬಿಡಬೇಕು. ಪಾಶ್ಚಿಮಾತ್ಯ ದೇಶಗಳ ಜ್ಞಾನ , ವಿಜ್ಞಾನ, ಶಿಕ್ಷಣವೇ ಶ್ರೇಷ್ಠ ಎಂಬ ತಪ್ಪು ಕಲ್ಪನೆಯನ್ನು ಬಿಡಬೇಕು ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದ್ದಾರೆ.
ಎರಡು ದಿನಗಳ ಸೌಂದರ್ಯಲಹರಿ ಪಾರಾಯಣ – ಮಹಾಸಮರ್ಪಣೆಗೆ ಅರಮನೆ ಮೈದಾನದಲ್ಲಿ ಶನಿವಾರ ಚಾಲನೆ ದೊರೆತಿದ್ದು, ಈ ಸಮಾರಂಭದಲ್ಲಿ ಕಿರಣ್ ಕುಮಾರ್ ಮಾತನಾಡಿದರು.
ಇಸ್ರೊ ತಡವಾಗಿ ಕಾರ್ಯಾರಂಭ ಮಾಡಿದರೂ ಇಂದು ಜಗತ್ತಿನ ಅತಿ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ . ಚಂದ್ರನಲ್ಲಿ ನೀರಿನ ಅಂಶವನ್ನು ಪತ್ತೆ ಮಾಡಿರುವುದರ ಜತೆಗೆ ಮಂಗಳಕ್ಕೂ ಉಪಹ್ರಹ ಕಳಿಸಿದೆ ಎಂದರು
ಬೆಂಗಳೂರಿನ ಸುತ್ತಮುತ್ತಲಿನ ಸುಮಾರು 800 ಶಾಲೆಗಳ 50 ಸಾವಿರ ಮಕ್ಕಳು ಸಾಮೂಹಿಕ ಪಾರಾಯಣ ಮಾಡಿದರು.
ಯಡತೊರೆ ಮಠದ ಶಂಕರಭಾರತಿ ಸ್ವಾಮೀಜಿ ಮಾತನಾಡಿ, ಶಿಕ್ಷಣ ಇದ್ದರೆ ಮೂರು ಲೋಕಗಳ ಒಡೆಯರಾಗಿ ಬಾಳಬಹುದು. ಸೌಂದರ್ಯ ಲಹರಿ ಪಾರಾಯಣವು ಮಕ್ಕಳಲ್ಲಿ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
Comments are closed.