ಕುಂದಾಪುರ: ವಿವಾಹಿತ ಮಹಿಳೆಯೋರ್ವಳು ನಿಗೂಢವಾಗಿ ನಾಪತ್ತೆಯಾದ ಘಟನೆ ಹಂಗಳೂರು ಗ್ರಾಮದ ಕೋಟೇಶ್ವರ ನೇರಂಬಳ್ಳಿಯಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ರವಿ ದೇವಾಡಿಗ ಅವರ ಪತ್ನಿ ಪವಿತ್ರಾ (24) ನಾಪತ್ತೆಯಾದ ಮಹಿಳೆ.
ಜು. 15ರ ಬೆಳಗ್ಗೆ ಬ್ಯಾಂಕಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದಾಕೆ ವಾಪಾಸು ಬಂದಿಲ್ಲ ಎಂದು ಅವರ ಪತಿ ರವಿ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.