
ಮಂಗಳೂರು,ಜ.25 : ಮಂಗಳೂರಿನ ವೆಲೆನ್ಸಿಯಾದ ವಿಶ್ವಾಸ್ ಪ್ರೆಸ್ ನಿರ್ದೇಶಕರಾಗಿರುವ 91 ರ ಹರೆಯದ ಡಾ.ಒಲಿಂಡಾ ಪಿರೇರಾ ಅವರು “ಕರಾವಳಿ ಗೌರವ ಪ್ರಶಸ್ತಿ” ಗೆ ಈ ಬಾರಿ ಅಯ್ಕೆಯಾಗಿದ್ದಾರೆ.
ಅ ಹಲವಾರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಈ ಪ್ರಶಸ್ತಿಗೆ ಅಯ್ಕೆ ಮಾಡಲಾಗಿದೆ. 2002ರಲ್ಲಿ ಸಮಾಜ ಸೇವೆಗಾಗಿ ಸಂದೇಶ ಪ್ರಶಸ್ತಿಯನ್ನು ಪಡೆದಿರುವ ಅವರು ಇತರ ಹಲವಾರು ಪ್ರಶಸ್ತಿ ಹಾಗೂ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಜ.26 ರಂದು ಕದ್ರಿ ಉದ್ಯಾವನದ ಸಾಂಸ್ಕ್ರೀತಿಕ ವೇದಿಕೆಯಲ್ಲಿ ಪ್ರಶಸ್ತಿಯನ್ನು ಪ್ರದಾನ ಸಮಾರಂಭ ನಡೆಯಲಿದೆ.