
ಮಂಗಳೂರು,ಜ.14: ನಗರದ ಕದ್ರಿ ಉದ್ಯಾನವನ ಪಕ್ಕದ ಜಿಂಕೆ ಪಾರ್ಕ್ನಲ್ಲಿ 5 ಕೋಟಿ ರೂ. ವೆಚ್ಚದ ಸಂಗೀತ ಕಾರಂಜಿಯ ಕಾಮಗಾರಿಗೆ ಇಂದು ಶಾಸಕ ಜೆ.ಆರ್. ಲೋಬೋ ಚಾಲನೆ ನೀಡಿದರು
ಬಳಿಕ ಮಾತನಾಡಿದ ಅವರು, ಪ್ರಸ್ತುತ ಇರುವ ಶೇ. 90ರಷ್ಟು ಮರಗಳನ್ನು ಉಳಿಸಿಕೊಂಡು ಈ ಸಂಗೀತ ಕಾರಂಜಿ ನಿರ್ಮಾಣವಾಗಲಿದೆ. ವೆಂಕಟೇಶ್ ಪೈ ಸಂಗೀತ ಕಾರಂಜಿಯ ವಿನ್ಯಾಸಗಾರರಾಗಿದ್ದು, ಲ್ಯಾಂಡ್ ಸ್ಕೇಪ್, ಬಯಲು ರಂಗಮಂದಿರ, ಲೇಸರ್, ಶಾಪಿಂಗ್ ಕಿಯಾಸ್ಕ್ನೊಂದಿಗೆ ಈ ಸಂಗೀತ ಕಾರಂಜಿ ನಿರ್ಮಾಣವಾಗಲಿದ್ದು, ಜತೆಗೆ ಪಾರ್ಕ್ನಲ್ಲಿ ಇತರ ಅಭಿವೃದ್ಧಿ ಕಾಮಗಾರಿಗಳೂ ನಡೆಯಲಿವೆ ಎಂದು ಅವರು ಹೇಳಿದರು.

ಈ ಸಂದರ್ಭ ಮೂಡಾ ಆಯುಕ್ತ ಮುಹಮ್ಮದ್ ನಝೀರ್, ಕಾಂಗ್ರೆಸ್ ನಾಯಕ ಟಿ.ಕೆ. ಸುಧೀರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು